ನೀವು ನಂಬಿ ಕೊಟ್ಟ ದುಡ್ಡು ವಾಪಸ್ ಬರ್ತಿಲ್ವಾ? ಹೀಗೆ ಮಾಡಿದರೆ ಅವರಿಗವರೇ ಸಂತೋಷದಿಂದ ನಿಮ್ಮ ಕೈಯಲ್ಲಿ ಹಣ ಇಡುತ್ತಾರೆ

ನಮಸ್ಕಾರ ಸ್ನೇಹಿತರೆ, ನಾವು ಕೆಲವು ವ್ಯಕ್ತಿಗಳಿಗೆ ಅವರ ಅವಸರಕ್ಕೆ ಹಣವನ್ನು ಸಾಲವಾಗಿ ಕೊಡುತ್ತೇವೆ. ಬಡ್ಡಿ ಬರುತ್ತದೆ ಎಂದು ಅಥಾವ ಕೈ ಸಾಲಕ್ಕೆ ಇರಬಹುದು. ಈ ರೀತಿ ಮನುಷ್ಯರು ಅವರ ಅವಸರಕ್ಕೆ ಹಣಕ್ಕಾಗಿ ಬರುತ್ತಾರೆ. ನಮ್ಮಲ್ಲಿ ಇರುವ ಹಣವನ್ನು ಅವರ ಸಹಾಯಕಾಗಿ ಕೊಡುತ್ತೇವೆ. ಅದು ಕೆಲವರು ಬಡ್ಡಿ ಬರುತ್ತದೆ ಎಂದು ಸಹ ಕೊಡಬಹುದು ಇನ್ನು ಕೆಲವು ಸಂದರ್ಭಗಳಲ್ಲಿ ಹಣವನ್ನು ವ್ಯಾಪಾರದಲ್ಲಿ ಇಟ್ಟಿರುತ್ತಾರೆ. ಅದು ವ್ಯಾಪಾರ ಮಾಡುವುದಕ್ಕೆ ಪ್ರಯತ್ನ ಮಾಡುತ್ತಾರೆ. ಅವರ ಜಾತಕ ಚಕ್ರದಲ್ಲಿ ಕೆಟ್ಟ ದೆಸೆಯಿಂದ ಎಷ್ಟೇ ಪ್ರಯತ್ನ ಮಾಡಿದರೂ ನಿಮ್ಮ ಹಣ ಒಸುಲಿ ಆಗುವುದಿಲ್ಲ.

ಕಷ್ಟಗಳನ್ನು ಅನುಭವಿಸುತ್ತ ಇರುತ್ತಾರೆ ಹಣ ತೊಗಳುವಾಗ ಸಿಹಿ ಮಾತನ್ನು ಆಡುತ್ತಾರೆ ಆದರೆ ಕೊಡಬೇಕು ಅಂದಾಗ ನೆಪವನ್ನು ಹೇಳುತ್ತಾರೆ. ಇದರಿಂದ ಗಟ್ಟಿಯಾಗಿ ಹಣ ಕೇಳಿದರೆ ಸಂಬಂಧ ಹಾಳಾಗುವಬಹುದು. ಇದಕ್ಕೆ ಪರಿಹಾರ ಏನು ಎಂಬುದನ್ನು ನಾವು ತಿಳಿದುಕೊಳ್ಳೋಣ ಬನ್ನಿ.ಮೊದಲಿಗೆ ಅವರ ವಾಸ ಮಾಡುವ ಮನೆ ಯಾವುದು ಆಗಲಿ, ಕೆಲಸ ಮಾಡುವ ಕಚೇರಿ ಯಾವುದು ಆಗಲಿ ಅಲ್ಲಿ ಈಶಾನ್ಯ ದಿಕ್ಕು ಯಾವುದು ಎಂದು ಗುರುತಿಸಬೇಕು.

ಈಗ ನಾವು ಹೇಳುವ ಪರಿಹಾರವನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಮಾಡಿದರೆ ಸಂಪತ್ತು ತಾನಾಗೇ ಬರುತ್ತದೆ. ಈಶಾನ್ಯ ದಿಕ್ಕಿನಲ್ಲಿ ಮಹಾಲಕ್ಷ್ಮಿಯ ಫೋಟೋವನ್ನು ಇಟ್ಟು ನೀವು 48 ದಿವಸಗಳ ಕಾಲ ದೇವಿಯ ಮುಂದೆ ಕೊಬ್ಬರಿ ಎಣ್ಣೆಯಿಂದ ದೀಪ ಹಚ್ಚಬೇಕು ಮತ್ತು ಗಣಪತಿ ಆರಾಧನೆ ಸಹ ಮಾಡಬೇಕು. ಅವರ ಕುಟುಂಬದಲ್ಲಿ ಯಾರಿಂದಾದರು ಹಣ ಬರಬೇಕು ಎಂದರೆ ಪ್ರತಿ ದಿನ ಮಹಾಲಕ್ಷ್ಮಿ ಅಷ್ಟೊಥರವನ್ನು ಪಠಿಸಬೇಕು ಹಾಗೂ ಪ್ರತಿ ದಿನ ಸಿಹಿಯನ್ನು ನೈವೇದ್ಯ ಮಾಡಬೇಕು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುತ್ತಿದ್ದಾರೆ.

ಹಾಗೆ ಶನಿವಾರದಂದು ಏಕಾದಶಿ ಆಗಲಿ, ದಶಮಿ ಆಗಲಿ ಇಂತಹ ದಿನಗಳಲ್ಲಿ ಅರಳಿ ಮರದಿಂದ ಒಂದು ಎಲೆಯನ್ನು ತೆಗೆದುಕೊಂಡು ಮನೆಗೆ ಬಂದು ಆ ಎಲೆಯಲ್ಲಿ ಮೊಸರು ಹಾಕಿ ಅದರಲ್ಲಿ ಐದು ಉದ್ದಿನ ಬೇಳೆ ಕಾಳು ಹಾಕಿ ಗಂಟು ಕಟ್ಟಬೇಕು. ಅದನ್ನು ತೆಗೆದುಕೊಂಡು ಹೋಗಿ ಕಟ್ಟಿರುವ ಗಂಟನ್ನು ತೆಗೆದು ಅರಳಿ ಮರದ ಕೆಳಗೆ ದೀಪ ಹಚ್ಚಬೇಕು ಮತ್ತು ಬ್ರಹ್ಮ ಮಹೇಶ್ವರ ಮತ್ತು ವಿಷ್ಣು ಮನಸ್ಸಿನಲ್ಲಿ ಪ್ರಾರ್ಥನೆ ಮಾಡಬೇಕು ನೀವು ಆ ಗಂಟು ಬಿಚ್ಚುವ ಸಮಯದಲ್ಲಿ ಮನಸ್ಸಿನಲ್ಲಿ ಪ್ರಾರ್ಥನೆ ಮಾಡಬೇಕು ಹಾಗೆ ಅರಳಿ ಮರಕ್ಕೆ ಮೂರು ಪ್ರದಕ್ಷಿಣೆ ಹಾಕಬೇಕು.

Leave a Comment