ಗಣೇಶನ ಹಬ್ಬದಂದು ಈ ತಪ್ಪುಗಳನ್ನು ಮಾಡಿದರೆ ಕಷ್ಟ ಅನುಭವಿಸಬೇಕಾದೀತು!

ಗಣೇಶನ ಹಬ್ಬದ ದಿನ ಈ ತಪ್ಪುಗಳನ್ನು ಮಾಡುವುದರಿಂದ ಆ ವರ್ಷ ಪೂರ್ತಿ ಸಂಕಷ್ಟ ತಪ್ಪಿದ್ದಲ್ಲ. ಅಪವಾದ ನಿಂದನೆಗಳು ಬರುತ್ತಲೇ ಇರುತ್ತದೆ ಹಾಗೂ ಸಮಸ್ಸೆಗಳು ಕಾಡುವುದಕ್ಕೆ ಶುರು ಮಾಡುತ್ತವೆ.ಗಣೇಶ ಹಬ್ಬದ ದಿನ ಭಕ್ತಿಯಿಂದ ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡು ಗಣೇಶನ ಪೂಜೆಯನ್ನು ಮಾಡುತ್ತಾರೆ. ಅದರೆ ಗೊತ್ತಿಲ್ಲದೇ ಈ ತಪ್ಪು ಮಾಡಿದರೆ ವರ್ಷಪೂರ್ತಿ ಕಷ್ಟ ಅನುಭವಿಸಬೇಕಾಗುತ್ತದೆ.

ಚಂದ್ರನ ದರ್ಶನವನ್ನು ಯಾವುದೇ ಕಾರಣಕ್ಕೂ ಮಾಡಬಾರದು..

ಚಂದ್ರನನ್ನು ನೋಡಿದರೆ ಸಾಕಷ್ಟು ಕಷ್ಟ ಹಾಗೂ ನಿಂದನೆಗೆ ಗುರಿ ಆಗುತ್ತಿರ.ಒಂದು ವೇಳೆ ಚಂದ್ರನ ದರ್ಶನ ಮಾಡಿದರೆ ಈ ಸರಳ ಮಾರ್ಗವನ್ನು ಅನುಸರಿಸಿ ಪರಿಹಾರವನ್ನು ಮಾಡಿಕೊಂಡು ಗಣೇಶನ ಕೃಪೆಗೆ ಪಾತ್ರರಾಗಬೇಕು.ಗಣೇಶ ಹಬ್ಬದ ದಿನ ಪೂಜೆಯ ನಂತರ ಈ ಒಂದು ಶಕ್ತಿಶಾಲಿಯಾದ ಮಂತ್ರವನ್ನು ಪಟಿಸಲೇಬೇಕು.ಈ ಮಂತ್ರ ಪಠನೆಯಿಂದ ಚಂದ್ರನನ್ನು ನೋಡಿದ ಪಾಪ ಕಡಿಮೆ ಆಗುತ್ತದೆ.ಗಣೇಶ ಪೂಜೆ ಮಾಡಿ ಸಂಕಲ್ಪ ಮಾಡಿಕೊಂಡು ಈ ಮಂತ್ರವನ್ನು ಪಠಿಸಿ.

ವಸುದೇವ ಸುತಂ ದೇವಂ ಕಂಸ ಚಾಣುರಾ ಮರ್ದನಮ್ ||
ದೇವಕಿ ಪರಮನಂದಂ ಕೃಷ್ಣಂ ಒಂದೇ ಜಗದ್ಗುರುಮ್ ||

ಈ ಮಂತ್ರವನ್ನು ಪಠಿಸಿದರೆ ಶ್ರೀ ಕೃಷ್ಣನ ಅನುಗ್ರಹ ಆಗುತ್ತದೆ. ಚಂದ್ರನ ದರ್ಶನ ಮಾಡಿದವರಿಗೆ ಈ ಮಂತ್ರವನ್ನು ಪಠಿಸುವುದರಿಂದ ಶಾಪ ತಟ್ಟುವುದಿಲ್ಲ ಹಾಗೂ ಸಾಕ್ಷಾತ್ ಗಣೇಶನ ಕೃಪೆಗೆ ಪಾತ್ರರಾಗುತ್ತೀರ. ಗಣೇಶನ ಕೃಪೆಯಿಂದ ವರ್ಷಪೂರ್ತಿ ಸುಖ ಶಾಂತಿಯಿಂದ ಜೀವನ ನಡೆಸಬಹುದು. ಯಾವುದೇ ರೀತಿಯ ಅಪವಾದ ನಿಂದನೆಗಳು ಬರುವುದಿಲ್ಲ. ಆದಷ್ಟು ಗಣೇಶನ ಹಬ್ಬದ ದಿನ ಚಂದ್ರನ ದರ್ಶನ ಮಾಡಬಾರದು.

https://youtu.be/v6pTt198sbc?si=BOZXuJaZ9hCMHY1q

Leave a Comment