ವಾಸ್ತು ಪ್ರಕಾರ ಮನೆಯಲ್ಲಿ ಅದೃಷ್ಟ ತರುವ ಗಿಡಗಳನ್ನು ಯಾವ ದಿಕ್ಕಿನಲ್ಲಿ ನೆಡಬೇಕು ಗೊತ್ತಾ?

ಮನೆಯಲ್ಲಿ ಹಸಿರು ಇರುವುದು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಗಮನಾರ್ಹ ಪರಿಣಾಮ ಬೀರುತ್ತದೆ. ಶಾಸ್ತ್ರದ ಪ್ರಕಾರ, ಕೆಲವು ಒಳಾಂಗಣ ಸಸ್ಯಗಳು ಗಾಳಿಯನ್ನು ಶುದ್ಧೀಕರಿಸುವುದು ಮಾತ್ರವಲ್ಲದೆ, ಹಲವು ವಿಶೇಷವಾದ ಪ್ರಯೋಜನಗಳನ್ನು ನೀಡುತ್ತವೆ.

ನೀವು ಮನೆಯಲ್ಲಿ ಈ ಸಸ್ಯಗಳನ್ನು ವಾಸ್ತುಪ್ರಕಾರವಾಗಿ ಒಂದು ಲೆಕ್ಕಾಚಾರದಲ್ಲಿ ಜೋಡಿಸಿ ಬೆಳೆಸಿದ್ದೇ ಆದಲ್ಲಿ, ಅವು ಸಕಾರಾತ್ಮಕ ಪರಿಣಾಮ ಬೀರುವುದು ಮಾತ್ರವಲ್ಲದೆ, ಆ ಮೂಲಕ ನಿಮ್ಮ ಆರೋಗ್ಯ ಹಾಗೂ ಸಂತೋಷವನ್ನು ಸಹ ಹೆಚ್ಚಿಸಿಕೊಳ್ಳಬಹುದು.

ವಾಸ್ತುವಿನ ಪ್ರಕಾರ, ಅದೃಷ್ಟದ ಸಸ್ಯಗಳನ್ನು ಇಡುವುದರಿಂದ ಆಗುವ ಪ್ರಯೋಜನಗಳೇನು?ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಮನೆಯಲ್ಲಿ ಒಳಾಂಗಣ ಸಸ್ಯಗಳನ್ನು ಬೆಳೆಸುವುದರಿಂದ ಹಲವಾರು ಪ್ರಯೋಜನಗಳಿವೆ. ವಾಸ್ತು ಸಸ್ಯಗಳು ಶಕ್ತಿಯ ಹರಿವು ಮತ್ತು ಪರಿಚಲನೆಯನ್ನು ಸುಧಾರಿಸುವುದರ ಜೊತೆಗೆ ಸಕಾರಾತ್ಮಕತೆ ಮತ್ತು ಸಮತೋಲನವನ್ನು ಉತ್ತೇಜಿಸುತ್ತದೆ ಎಂದು ನಂಬಲಾಗಿದೆ. ಒಟ್ಟಾರೆ ಯೋಗಕ್ಷೇಮ ಮತ್ತು ಸಂತೋಷವನ್ನು ಹೆಚ್ಚಿಸಿಕೊಳ್ಳಲು ಒಳ್ಳೆಯ ಮಾರ್ಗವೇ ಸರಿ.

ವಾಸ್ತು ಸಸ್ಯಗಳು ಒಳಾಂಗಣ ವಿನ್ಯಾಸದ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ಗಾಳಿಯನ್ನು ಶುದ್ಧೀಕರಿಸಲು ಮತ್ತು ಸಾಮರಸ್ಯದ ವಾತಾವರಣವನ್ನು ನಿರ್ಮಿಸುತ್ತವೆ.ಈ ಗಿಡಗಳು ಸುತ್ತಮುತ್ತಲಿನ ಪರಿಸರದಲ್ಲಿನ ನಕಾರಾತ್ಮಕ ಶಕ್ತಿಯನ್ನು ಶುದ್ಧೀಕರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ನಂಬಲಾಗಿದೆ.ಇದಲ್ಲದೆ, ವಾಸ್ತು ಸಸ್ಯಗಳು ಮನೆಯೊಳಗೆ ಸರಿಯಾದ ಸಮತೋಲನ ಮತ್ತು ಶಕ್ತಿಯ ಪರಿಚಲನೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆ ಮೂಲಕ ಶಾಂತಿಯುತ ವಾತಾವರಣವನ್ನು ನಿರ್ಮಿಸುತ್ತವೆ.

ಕೆಲವು ವಾಸ್ತು ಸಸ್ಯಗಳು ಆರೋಗ್ಯವನ್ನು ಸಹ ಉತ್ತೇಜಿಸುತ್ತವಂತೆ ಮತ್ತು ಮನೆಯವರ ಒಟ್ಟಾರೆ ಯೋಗಕ್ಷೇಮ ಸುಧಾರಣೆಯಲ್ಲೂ ಇವುಗಳ ಪಾತ್ರವಿದೆ.ಆದರೆ, ಈ ಸಸ್ಯಗಳನ್ನು ಮನೆಯಲ್ಲಿ ಬೆಳೆಸುವಾಗ ಕೆಲವು ಅಂಶಗಳನ್ನು ಗಮನಿಸಿವುದು ಬಹಳ ಮುಖ್ಯ. ಅದರಲ್ಲಿ ಬಹು ಮುಖ್ಯವಾದುದುದೇನೆಂದರೆ, ಅವನ್ನು ಇಡಬೇಕಾದ ದಿಕ್ಕು.ಹೌದು, ಈ ಸಸ್ಯಗಳನ್ನು ವಾಸ್ತು ಪ್ರಕಾರವೇ ನಿರ್ದಿಷ್ಟವಾದ ದಿಕ್ಕಿನಲ್ಲಿ ಇಡಬೇಕಾಗುತ್ತದೆ. ಏಕೆಂದರೆ, ಇವನ್ನು ತಪ್ಪು-ತಪ್ಪಾದ ದಿಕ್ಕಿನಲ್ಲಿ ಇಟ್ಟರೆ, ಮನೆಯಲ್ಲಿ ಋಣಾತ್ಮಕ ಪರಿಣಾಮಗಳನ್ನು ಉಂಟುಮಾಡಿ, ದುರದೃಷ್ಟಕ್ಕೆ ಕಾರಣವಾಗಬಹುದು.

ಹಾಗಾದರೆ, ಮನೆಗೆ ಅದೃಷ್ಟ ತರುವ ಆ ಗಿಡಗಳು ಯಾವುವು?

ನಿಮ್ಮ ಮನೆಯಲ್ಲಿ ಸದಾ ಕಾಲ ಧನಾತ್ಮಕ ವಾತಾವರಣವಿರಬೇಕೆಂದು ನೀವು ಬಯಸುವುದಾದರೆ, ನಿಮಗೆ ವಾಸ್ತು ತಜ್ಞರು ಶಿಫಾರಸು ಮಾಡುವ ಕೆಲವು ಉತ್ತಮ ಒಳಾಂಗಣ ಸಸ್ಯಗಳು ಇವೇ ನೋಡಿ. ಈ ಸಸ್ಯಗಳು ಸಮೃದ್ಧಿಯನ್ನು ತರುತ್ತವೆ ಎಂಬುದು ಸಾಮಾನ್ಯ ನಂಬಿಕೆ. ಬನ್ನಿ ಹಾಗಿದ್ದರೆ, ಅದೃಷ್ಟ ತರುವ ಆ ಸಸ್ಯಗಳ ಪರಿಚಯ ಮಾಡಿಕೊಳ್ಳೋಣ.

ತುಳಸಿ-ತುಂಬಾ ಪವಿತ್ರವಾದ ಸಸ್ಯವೆಂದೇ ನಮ್ಮ ಭಾರತದಲ್ಲಿ ಪ್ರಸಿದ್ದಿ ಪಡೆದಿರುವ ಗಿಡವೆಂದರೆ, ಅದು ತುಳಸಿ. ತುಳಸಿ, ನಮ್ಮ ಭಾರತೀಯ ಉಪಖಂಡದಲ್ಲಿ ವಾಸ್ತು ಶಾಸ್ತ್ರದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ನಮ್ಮ ಸಮಾಜದಲ್ಲಿ ವಿಶೇಷವಾದ ಗೌರವ ಪಡೆದಿರುವ ಈ ಸಸ್ಯವು ಅದರ ಚಿಕಿತ್ಸಕ ಗುಣಲಕ್ಷಣಗಳಿಗೆ ಹೆಸರುವಾಸಿ. ಏಕೆಂದರೆ, ಇದು ನೈಸರ್ಗಿಕ ಗಾಳಿ ಶುದ್ಧಿಕಾರಕವಾಗಿ ಕಾರ್ಯನಿರ್ವಹಿಸುತ್ತದೆ, ಶುದ್ಧ ಆಮ್ಲಜನಕವನ್ನು ಉತ್ಪಾದಿಸುತ್ತದೆ ಮತ್ತು ಹಾನಿಕಾರಕ ಜೀವಾಣುಗಳನ್ನು ತೆಗೆದುಹಾಕುತ್ತದೆ.ದೇಹದಲ್ಲಿನ ವಿಷಕಾರಿ ಅಂಶವನ್ನು ತೆಗೆಯಲು ಇದರ ಎಲೆಯ ಸೇವನೆ ಅತ್ಯಂತ ಪರಿಣಾಮಕಾರಿ ವಿಧಾನವೆಂದು ಪರಿಗಣಿಸಲಾಗಿದೆ.

ತುಳಸಿ ಸಸ್ಯವನ್ನು ಇಡಲು ಉತ್ತಮ ದಿಕ್ಕು – ಈ ಪವಿತ್ರ ಸಸ್ಯವನ್ನು ಮನೆಯ ಉತ್ತರ, ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿ ಇಡುವುದು ಸೂಕ್ತ. ಈ ದಿಕ್ಕುಗಳಲ್ಲಿ ತುಳಸಿಯನ್ನು ಇಡುವುದರಿಂದ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗಿರುತ್ತದೆ. ಹಾಗೆಯೇ, ಇದನ್ನು ದಕ್ಷಿಣ ದಿಕ್ಕಿನಲ್ಲಿ ಇಟ್ಟರೆ, ನಕಾರಾತ್ಮಕ ಪರಿಣಾಮ ಬೀರಬಹುದು.

ಜೇಡ-ಸ್ತು ಶಾಸ್ತ್ರದ ಪ್ರಕಾರ, ಜೇಡ ಸಸ್ಯವನ್ನು ನಿಮ್ಮ ಮನೆಯಲ್ಲಿ ಸೂಕ್ತ ದಿಕ್ಕಿನಲ್ಲಿ ಇಟ್ಟರೆ, ಶಕ್ತಿಯ ಹರಿವು ಹೆಚ್ಚಾಗುತ್ತದಂತೆ. ವೃತ್ತಾಕಾರದ ಹಸಿರು ಎಲೆಗಳನ್ನು ಹೊಂದಿರುವ ಸಣ್ಣ ಸಸ್ಯ ಆಕರ್ಷಕವಾಗಿದೆ. ಈ ಗಿಡವು ಅದೃಷ್ಟ ಮತ್ತು ಪ್ರಗತಿ, ಶ್ರೀಮಂತಿಕೆ, ಸಮೃದ್ಧಿ ಮತ್ತು ರಚನಾತ್ಮಕ ಶಕ್ತಿಗೆ ಹೆಸರಾಗಿದೆ. ಮಾತ್ರವಲ್ಲದೆ, ಇದು ಸಾಮಾಜಿಕ ಬಂಧಗಳನ್ನು ಪೋಷಿಸಲು ಮತ್ತು ಬಲಪಡಿಸಲು ಸಹಾಯ ಮಾಡುತ್ತದೆ.

ಉತ್ತಮವಾದ ದಿಕ್ಕು – ನಿಮ್ಮ ಪ್ರವೇಶದ್ವಾರದ ಆಗ್ನೇಯ ದಿಕ್ಕಿನಲ್ಲಿ ಜೇಡ್ ಸಸ್ಯವನ್ನು ಇರಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ, ಇದು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.ಹಾಗೆಯೇ, ಮಲಗುವ ಕೋಣೆ ಅಥವಾ ಸ್ನಾನಗೃಹದಂತಹ ಪ್ರದೇಶಗಳಲ್ಲಿ ಸಸ್ಯವನ್ನು ಇಡಬಾರದೆಂದು ಸಲಹೆ ನೀಡಲಾಗುತ್ತದೆ. ಏಕೆಂದರೆ, ಇದು ನಕಾರಾತ್ಮಕ ಶಕ್ತಿಗೆ ಕಾರಣವಾಗಬಹುದು.

ಲಕ್ಕಿ ಬಿದಿರು

ಪುಟ್ಟ ಪುಟ್ಟ ಎಳೆಗಳುಳ್ಳ ಹಾಗೂ ಹೆಸರಿನಲ್ಲೇ ‘ಲಕ್’ ಹೊಂದಿರುವ ಈ ಲಕ್ಕಿ ಬಿದಿರು ಸಹ ಒಂದು ವಾಸ್ತು ಸಸ್ಯವಾಗಿದ್ದು, ಮನೆಗೆ ಧನಾತ್ಮಕ ಶಕ್ತಿ, ಶಾಂತಿ, ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ. ಮನೆ ಅಥವಾ ಕಚೇರಿ ಪರಿಸರವನ್ನು ಹೆಚ್ಚಿಸಲು ಬಯಸುವವರಿಗೆ ಇದು ಸೂಕ್ತವಾದ ಗಿಡ.

ಅತ್ಯುತ್ತಮ ದಿಕ್ಕು – ವಾಸ್ತು ತತ್ವಗಳ ಪ್ರಕಾರ ಆಗ್ನೇಯ ದಿಕ್ಕು ಸಂಪತ್ತಿನ ದಿಕ್ಕು ಆಗಿರುವುದರಿಂದ ಈ ಗಿಡವನ್ನು ಮನೆಯ ಆಗ್ನೇಯ ಭಾಗದಲ್ಲಿ ಇಡಬೇಕು. ಮನೆಯ ಆಗ್ನೇಯ ಅಥವಾ ಪೂರ್ವ ವಲಯದಲ್ಲಿರುವ ಬಿದಿರಿನ ಸಸ್ಯವು ಗಮನಾರ್ಹ ಧನಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಧನಾತ್ಮಕ ಶಕ್ತಿಯ ಹರಿವನ್ನು ಉತ್ತೇಜಿಸುತ್ತದೆ ಮತ್ತು ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.

ಮನೆಯ ಲಿವಿಂಗ್‌ ರೂಂ ಅಥವಾ ನೀವು ಕೆಲಸ ಮಾಡುವ ಟೇಬಲ್‌ ಮೇಲೆಯೂ ಇಟ್ಟುಕೊಳ್ಳಬಹುದು. ಎರಡು ಕೊಂಬೆಯ ಬಿದಿರು ದಂಪತಿಗಳಲ್ಲಿ ಪ್ರೀತಿಯನ್ನು ಹೆಚ್ಚಿಸುವುದು ಎಂದೂ ಹೇಳಲಾಗುತ್ತದೆ.

ಗೋಲ್ಡನ್ ಪೊಥೋಸ್ ಅಥವಾ ಮನಿ ಪ್ಲಾಂಟ್

ಮನಿ ಪ್ಲಾಂಟ್/ ಗೋಲ್ಡನ್ ಪೊಥೋಸ್, ಮನೆ ವಾಸ್ತುಗಾಗಿ ಇಡುವ ಜನಪ್ರಿಯ ಅದೃಷ್ಟದ ಸಸ್ಯಗಳಲ್ಲಿ ಒಂದು. ಇದು ಧನಾತ್ಮಕ ಶಕ್ತಿಯನ್ನು ಹೊರಸೂಸುತ್ತದೆ ಮತ್ತು ಪರಿಸರದಲ್ಲಿ ನಕಾರಾತ್ಮಕ ಶಕ್ತಿಯನ್ನು ತೊಡೆದುಹಾಕಿ ಸಂಪತ್ತನ್ನು ವೃದ್ಧಿಸುತ್ತದೆ. ಜೊತೆಗೆ, ಸಾಕಷ್ಟು ಪ್ರಮಾಣದ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಇದರ ಎಲೆಗಳು ಒತ್ತಡ ಮತ್ತು ಆತಂಕವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಇಡಬೇಕಾದ ದಿಕ್ಕು – ವಾಸ್ತು ಅನುಮೋದಿತ ಸಸ್ಯಗಳಲ್ಲಿ ಒಂದಾದ ಮನಿ ಪ್ಲಾಂಟ್ ಅನ್ನು ನಿಮ್ಮ ಮನೆಯ ಆಗ್ನೇಯ ದಿಕ್ಕಿನಲ್ಲಿ ಇರಿಸಬಹುದು. ಹಾಗೂ ಈಶಾನ್ಯ ಪ್ರದೇಶದಲ್ಲಿ ಇದನ್ನು ಇಡುವುದು ಅಷ್ಟೇನೂ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಏಕೆಂದರೆ ಇದು ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು.

ಶಾಂತಿ ಲಿಲಿ–ಪೀಸ್ ಲಿಲ್ಲಿ/ ಶಾಂತಿ ಲಿಲ್ಲಿಯು ತನ್ನ ಹೆಸರಿನೊಂದಿಗೆ ನಿಮ್ಮ ಮನೆಗೆ ಶಾಂತಿ ತರುವುದರಲ್ಲಿ ಆಶ್ಚರ್ಯವಿಲ್ಲ. ಇದು ಮನೆಯ ಅಲಂಕಾರಕ್ಕೆ ಸೂಕ್ತವಾದ ಗಿಡವಾಗಿದೆ. ಜೊತೆಗೆ, ನಕಾರಾತ್ಮಕ ಶಕ್ತಿಯ ವಿರುದ್ಧ ನೈಸರ್ಗಿಕ ರಕ್ಷಣೆಯಾಗಿ ಕಾರ್ಯನಿರ್ವಹಿಸುತ್ತದೆ. ಇದರ ನಿರ್ವಹಣೆಯೂ ಸಹ ಬಲು ಸುಲಭ.

ಪೀಸ್ ಲಿಲ್ಲಿಗೆ ಉತ್ತಮವಾದ ದಿಕ್ಕು – ಇದನ್ನು ನಿಮ್ಮ ಮಲಗುವ ಕೋಣೆಯ ಕಿಟಕಿಯ ಬಳಿ ಇರಿಸಿದಲ್ಲಿ, ಮನೆಯಲ್ಲಿ ಶಾಂತಿಯ ವಾತಾವರಣ ನಿರ್ಮಾಣವಾಗುತ್ತದೆ.

ಸ್ನೇಕ್ ಪ್ಲಾಂಟ್

ಇದರ ಅಧಿಕೃತ ಹೆಸರು ಸಾನ್ಸೆವೇರಿಯಾ. ಸಾಮಾನ್ಯವಾಗಿ, ವಾಸ್ತು ತಜ್ಞರು ಸೂಚಿಸುವ ಉತ್ತಮ ಅದೃಷ್ಟ ಒಳಾಂಗಣ ಸಸ್ಯಗಳಲ್ಲಿ ಇದು ಸಹ ಒಂದು. ಇದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತರುವುದಲ್ಲದೆ, ಆಮ್ಲಜನಕದ ಹರಿವನ್ನು ಹೆಚ್ಚಿಸುವ ಮೂಲಕ ಶಾಂತತೆಯನ್ನು ಉತ್ತೇಜಿಸುತ್ತದೆ. ಈ ಅದ್ಭುತವಾದ ಕಡಿಮೆ-ನಿರ್ವಹಣೆಯ ಸಸ್ಯವು ಹಾನಿಕಾರಕ ಜೀವಾಣುಗಳನ್ನು ತೊಡೆದುಹಾಕಲು ಸಹ ಸಹಾಯ ಮಾಡುತ್ತದೆ. ಜೊತೆಗೆ, ನಿಮ್ಮ ಕೋಣೆಯಲ್ಲಿ ಆರೋಗ್ಯಕರ ವಾತಾವರಣವಾಗಿ ನಿರ್ಮಿಸುತ್ತದೆ.

ಉತ್ತಮ ದಿಕ್ಕು – ಈ ಗಿಡವನ್ನು ಇರಿಸಲು ಕೋಣೆಯ ಪೂರ್ವ ಅಥವಾ ದಕ್ಷಿಣ ದಿಕ್ಕು ಉತ್ತಮ

ರಬ್ಬರ್ ಪ್ಲಾಂಟ್

ರಬ್ಬರ್ ಸಸ್ಯವನ್ನು ಮನೆಯ ಕುಂಡದಲ್ಲಿ ಬೆಳೆಸಿದರೆ, ಅದು ಆರ್ಥಿಕ ಸಮೃದ್ಧಿ, ವಾಣಿಜ್ಯ ಯಶಸ್ಸು ಮತ್ತು ಸಂಪತ್ತನ್ನು ತರುತ್ತದೆ ಎಂಬ ನಂಬಿಕೆಯಿದೆ. ಮನೆಗೆ ಅದೃಷ್ಟ ಬೇಕು ಎಂದು ಬಯಸುವವರಿಗೆ ಇದು ಉತ್ತಮ ಆಯ್ಕೆ. ವಾಸ್ತು ಪ್ರಕಾರ, ಸುತ್ತಿನಾಕಾರದಲ್ಲಿರುವ ಈ ಗಿಡದ ಎಲೆಗಳು ಸಂಪತ್ತು ಮತ್ತು ಆರ್ಥಿಕ ಬೆಳವಣಿಗೆಯನ್ನು ಸಂಕೇತಿಸುತ್ತದೆ.

ರಬ್ಬರ್ ಸಸ್ಯಕ್ಕೆ ಉತ್ತಮ ದಿಕ್ಕು -ಲಿವಿಂಗ್ ರೂಮಿನ ಆಗ್ನೇಯ ಮೂಲೆಯನ್ನು ರಬ್ಬರ್ ಸಸ್ಯಕ್ಕೆ ಸೂಕ್ತವಾದ ಸ್ಥಳವೆಂದು ಪರಿಗಣಿಸಲಾಗುತ್ತದೆ.

ಮಲ್ಲಿಗೆ–ಮಲ್ಲಿಗೆಯ ಪರಿಮಳ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ತನ್ನ ಸುವಾಸನೆಯಿಂದಲೇ ಪ್ರಸಿದ್ದಿ ಹೊಂದಿರುವ ಗಿಡವನ್ನು ಮನೆಯಲ್ಲಿ ಬೆಳೆಸಿದರೆ, ಅದು ಸಂತೋಷಕರ ವಾತಾವರಣವನ್ನು ಮೂಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ತನ್ನ ಸುಗಂದಧ ಮೂಲಕ ಇದು ಮನೆಯ ಸದಸ್ಯರಲ್ಲಿ ಧನಾತ್ಮಕ ಪರಿಣಾಮ ಬೀರುತ್ತದೆ ಮತ್ತು ಪ್ರೀತಿಯನ್ನು ಉತ್ತೇಜಿಸುತ್ತದೆ. ಜೊತೆಗೆ, ಮಲ್ಲಿಗೆ ಗಿಡವು ಆತಂಕ ಮತ್ತು ಒತ್ತಡವನ್ನು ನಿವಾರಿಸಲು ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಜಾಸ್ಮಿನ್ ಸಸ್ಯವನ್ನು ಇಡಲು ಉತ್ತಮ ದಿಕ್ಕು – ವಾಸ್ತು ಸಲಹೆಯ ಪ್ರಕಾರ, ಮಲ್ಲಿಗೆ ಗಿಡವನ್ನು ಒಳಾಂಗಣದಲ್ಲಿ ದಕ್ಷಿಣಾಭಿಮುಖ ಕಿಟಕಿಗಳ ಬಳಿ ಇಡಬೇಕು.

ಲ್ಯಾವೆಂಡರ್

ಲ್ಯಾವೆಂಡರ್, ಜನಪ್ರಿಯ ಅಲಂಕಾರಿಕ ಮತ್ತು ಔಷಧೀಯ ಮೂಲಿಕೆ. ಇದರ ಹಿತವಾದ ಪರಿಮಳವು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ವಿಶ್ರಾಂತಿ ಮತ್ತು ಶಾಂತಿಯುತ ನಿದ್ರೆಯನ್ನು ಉತ್ತೇಜಿಸುತ್ತದೆ ಮತ್ತು ಧನಾತ್ಮಕ ಶಕ್ತಿಯನ್ನುಸೃಷ್ಟಿಸುತ್ತದೆ. ಮಾತ್ರವಲ್ಲದೆ, ಪ್ರೀತಿ ಮತ್ತು ಪ್ರಣಯವನ್ನು ಉತ್ತೇಜಿಸುತ್ತದೆ. ಒತ್ತಡ-ಮುಕ್ತ ಮನೆಯ ವಾತಾವರಣ ನಿಮ್ಮ ಆಯ್ಕೆಯಾಗಿದ್ದಲ್ಲಿ ಲ್ಯಾವೆಂಡರ್ ಗಿಡವನ್ನು ಬೆಳೆಸಿ.

ಲ್ಯಾವೆಂಡರ್ ಸಸ್ಯಕ್ಕೆ ಉತ್ತಮ ದಿಕ್ಕು -ಲ್ಯಾವೆಂಡರ್ ಸಸ್ಯಗಳನ್ನು ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇರಿಸಬಹುದು. ಸಂಬಂಧಗಳನ್ನು ಸುಧಾರಿಸಲು ಮಲಗುವ ಕೋಣೆಯಲ್ಲಿ ಸೂರ್ಯನ ಬೆಳಕು ಬೀಳುವ ಜಾಗದಲ್ಲಿಯೂ ಸಹ ಇಡಬಹುದು.

Leave a Comment