ಮನೆಯಲ್ಲಿನ ಎಲ್ಲಾ ಸಮಸ್ಸೆಗಳಿಗೆ ಕಪ್ಪು ಸಾಸಿವೆಯಿಂದ ಪರಿಹಾರ!

ಎಲ್ಲರ ಜೀವನದಲ್ಲಿ ಸಮಸ್ಯೆ ಇರುತ್ತದೆ. ಆದರೆ ಕೆಲವರಿಗೆ ಮಾತ್ರ ಸಮಸ್ಯೆಗಳು ಎಂದಿಗೂ ಮುಗಿಯುವುದಿಲ್ಲ ಎನ್ನುವಷ್ಟಿರುತ್ತದೆ. ಈ ತೊಂದರೆಗಳಿಂದ ಮುಕ್ತಿ ಪಡೆಯಲು ನಾವು ಹಲವಾರು ಪರಿಹಾರ ಹುಡುಕುತ್ತೇವೆ. ಆದರೆ ಕೆಲವೊಮ್ಮೆ ಮನೆಯಲ್ಲಿರುವ ಒಂದು ವಸ್ತು ಈ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತದೆ. ಹಾಗಾದ್ರೆ ಯಾವ ವಸ್ತು ನಿಮ್ಮ ಸಮಸ್ಯೆಗಳಿಗೆ ಮುಕ್ತಿ ನೀಡುತ್ತದೆ ಎಂಬುದು ಇಲ್ಲಿದೆ.

ನಮ್ಮ ಅಡುಗೆ ಮನೆಯಲ್ಲಿರುವ ಪದಾರ್ಥಗಳು ಆಹಾರದ ರುಚಿಗೆ ಹಾಗೂ ಕೆಲ ಆರೋಗ್ಯ ಸಮಸ್ಯೆಗಳಿಗೆ ಮಾತ್ರ ಎಂದು ಹಲವಾರು ಜನರು ಭಾವಿಸಿದ್ದಾರೆ. ಆದರೆ ಆ ಪದಾರ್ಥಗಳು ನಮ್ಮ ಜೀವನದ ಅನೇಕ ಸಮಸ್ಯೆಗಳಿಗೆ ಸಹ ಪರಿಹಾರ ನೀಡುತ್ತದೆ.

ಜ್ಯೋತಿಷ್ಯದ ಪ್ರಕಾರ ಅಡುಗೆ ಮನೆಯಲ್ಲಿರುವ ಸಾಸಿವೆ ಸಾಲ, ಕೆಲಸದಲ್ಲಿ ತೊಂದರೆ, ಕುಟುಂದಲ್ಲಿ ಕಿರಿಕಿರಿ ಸೇರಿದಂತೆ ಅನೇಕ ಜೀವನದ ಸಮಸ್ಯೆಗಳಿಗೆ ಬಹಳ ಸುಲಭವಾಗಿ ಪರಿಹಾರ ನೀಡುತ್ತದೆ. ಕಷ್ಟಗಳಿಂದ ಮುಕ್ತಿ ಪಡೆಯಲು ಸಾಸಿವೆಯನ್ನು ಯಾವ ರೀತಿ ಬಳಕೆ ಮಾಡಬೇಕು ಎಂಬುದು ಇಲ್ಲಿದೆ.

ಒಂದು ಪಾತ್ರೆ ತೆಗೆದುಕೊಂಡು ಅದನ್ನು ನೀರಿನಿಂದ ತುಂಬಿಸಿ ಮತ್ತು ಅದರಲ್ಲಿ ಕೆಲವು ಸಾಸಿವೆ ಎಲೆ ಅಥವಾ ಕಾಳುಗಳನ್ನು ಹಾಕಿ. ನಂತರ ಆ ನೀರಿನಿಂದ ಶನಿವಾರ ಸ್ನಾನ ಮಾಡಿ. ಈ ರೀತಿ ಮಾಡುವುದರಿಂದ ಹಣದ ಸಮಸ್ಯೆ ಹಾಗೂ ಆರೋಗ್ಯ ಸಮಸ್ಯೆಗೆ ಮುಕ್ತಿ ಸಿಗುತ್ತದೆ.

ನೀವು ಸ್ವಲ್ಪ ಸಾಸಿವೆ, ಕಪ್ಪು ಎಳ್ಳು, ಕೊತ್ತಂಬರಿ ಬೀಜಗಳನ್ನು ಬೇರೆ ಬೇರೆ ಪಾತ್ರೆಯಲ್ಲಿ ಹಾಕಿ ಭಾನುವಾರ ನಿಮ್ಮ ಅಂಗಡಿ ಅಥವಾ ವ್ಯಾಪಾರ ಮಾಡುವ ಸ್ಥಳದಲ್ಲಿ ಇಡಿ. ಇದರಿಂದ ನಿಮ್ಮ ವ್ಯಾಪಾರದಲ್ಲಿ ಬೆಳವಣಿಗೆ ಆಗಿ, ದೊಡ್ಡ ಮಟ್ಟದ ಲಾಭ ಆಗುತ್ತದೆ.

ನಿಮ್ಮ ಮಗುವಿಗೆ ಯಾರದ್ದಾದರೂ ದೃಷ್ಟಿ ಬಿದ್ದಿದ್ದರೆ ಅಥವಾ ನಿಮಗೇ ಕೆಟ್ಟ ಅನುಭವ ಆಗುತ್ತಿದ್ದರೆ ಅದಕ್ಕೆ ಸಹ ಈ ಸಾಸಿವೆ ಪರಿಹಾರ ನೀಡುತ್ತದೆ. ಒಂದು ಮಾವಿನ ಮರದ ಕೆಳಗೆ ಕಟ್ಟಿಗೆಯಿಂದ ಬೆಂಕಿ ಹಾಕಿ, ನಂತರ 7 ಸಾಸಿವೆ ಕಾಳು, 7 ಕೆಂಪು ಮೆಣಸಿನಕಾಯಿ ಮತ್ತು ಏಳು ಉಪ್ಪಿನ ಉಂಡೆಯನ್ನು ಎಡಗೈನಿಂದ ತೆಗೆದುಕೊಂಡು ದೃಷ್ಟಿ ತೆಗೆದು ಬೆಂಕಿಗೆ ಹಾಕಬೇಕು.

ಯಾವುದೇ ಕೆಲಸ ಮಾಡಲು ಹೋದರು ಅದರಲ್ಲಿ ಯಶಸ್ಸು ಸಿಗುತ್ತಿಲ್ಲ ಎಂದರೆ ಪ್ರತಿ ಗುರುವಾರ ಸಾಸಿವೆಯನ್ನು ದಾನ ಮಾಡಬೇಕು. ಆಗ ನಿಮ್ಮ ಎಲ್ಲಾ ಕೆಲಸಗಳು ಯಾವುದೇ ಅಡೆತಡೆ ಇಲ್ಲದೇ ಆಗುತ್ತದೆ.

ನಿಮಗೆ ಸಾಲದಿಂದ ಮುಕ್ತಿ ಬೇಕು ಎಂದರೆ ಶನಿವಾರ ರಾತ್ರಿ 2 ಕೈನಲ್ಲಿ ಸಾಸಿವೆ ಕಾಳುಗಳನ್ನು ತೆಗೆದುಕೊಂಡು ವಿರುದ್ಧ ದಿಕ್ಕಿಗೆ ಅವುಗಳನ್ನು ಎಸೆಯಿರಿ. ನಂತರ ಅಡ್ಡ ದಾರಿಗೆ ಸಾಸಿವೆ ದೀಪ ಹಚ್ಚಿ ಹಿಂತಿರುಗಿ ನೋಡದೇ ಮನೆಗೆ ಬನ್ನಿ.

Leave a Comment