ಮಕ್ಕಳು ಬುದ್ದಿವಂತರಾಗ್ತಿಲ್ಲ ಅನ್ನೋ ಕೊರಗಿದೆಯಾ? ಹಯಗ್ರೀವ ಸ್ವಾಮಿ ನೆನೆದು ಹೀಗೆ ಮಾಡಿ!

ಜ್ಞಾನಾಂದ ಮಯಂ ದೇವಂ ನಿರ್ಮಲ ಸ್ಪಟಿಕಾ ಕೃತಿಂ ಆಧಾರಮ್ ಸರ್ವ ವಿದ್ಯಾನಂ ಹಯ್ಯಗ್ರೀವ ಉಪಾಸ್ಮಯೇ||ವಿದ್ಯಾರ್ಜನೆಗೆ ಅನಾದಿ ಕಾಲದಿಂದಲೂ ನಲಿತ ಇದೆ ಈ ಪ್ರಾರ್ಥನೆ. ಸ್ಪಟಿಕದಂತೆ ನಿರ್ಮಲ ಸ್ವರೂಪವಾದ ಶ್ರೀ ಹಯಗ್ರೀವ ಸ್ವಾಮಿಯೇ ಸಕಲ ವಿದ್ಯೆ ಆಧಾರವೇ ನೀನು. ನಮ್ಮ ಅಜ್ಞಾನಗಳನ್ನು ದೂರ ಮಾಡಿ ಸುಜ್ಞಾನವನ್ನು ದಯಪಾಲಿಸು ಅನ್ನುವುದೇ ಆರಂಭದಲ್ಲಿ ಹೇಳಿದ ಮಂತ್ರದ ಸಾರಾಂಶ.

ಸಿರಿ ಸಂಪತ್ತು ನಮ್ಮ ಮನೆಯಲ್ಲಿ ಎಷ್ಟೇ ಇದ್ದರೂ ಸಹ ಜ್ಞಾನ ಮತ್ತು ವಿದ್ಯೆ ಇಲ್ದೆ ಹೋದ್ರೆ ಅದೆಲ್ಲ ಕೆಲಸಕ್ಕೆ ಬಾರದಂತೆ ಆಗಿಬಿಡುತ್ತದೆ. ಮೋಸ ಹೋಗುವಂತಹ ಸಂದರ್ಭಗಳು ಬಹಳಷ್ಟು ರೀತಿಯಲ್ಲಿ ಇರುತ್ತದೆ. ಜ್ಞಾನವನ್ನು ಯಾವ ರೀತಿ ಬೆಳೆಸಿಕೊಳ್ಳಬೇಕು ಮತ್ತೆ ವಿದ್ಯೆ ಸರಸ್ವತಿಯನ್ನು ಯಾವ ರೀತಿ ಒಲಿಸಿಕೊಳ್ಳಬೇಕು. ಈಗ ನಿಮ್ಮನೆಯಲ್ಲಿ ಓದುವಂತಹ ಮಕ್ಕಳು ತುಂಬಾನೇ ಇರ್ತಾರೆ ಆದ್ರೆ ಅವರಿಗೆ ಪರೀಕ್ಷಾ ಸಮಯ ಬಂತು ಅಂದ್ರೆ ತುಂಬಾನೇ ಭಯಪಡುತ್ತಾರೆ. ಇವರು ವಿದ್ಯೆಯಲ್ಲಿ ಪಾರಂಗತರಾಗಿದ್ದರು ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳಬೇಕು ಅನ್ನೋದು ಎಲ್ಲ ತಂದೆ-ತಾಯಿಗಳ ಆಸೆಯಾಗಿರುತ್ತದೆ. ಹಾಗಾಗಿ ನೀವು ಈ ಒಂದು ಪರಿಹಾರವನ್ನು ಮಾಡಿಕೊಂಡರೆ ನಿಮ್ಮ ಮಕ್ಕಳು ಉನ್ನತ ವ್ಯಾಸಂಗಕ್ಕೆ ಹೋಗಲು ಸುಲಭವಾಗುತ್ತದೆ. ಈ ಒಂದು ಪರಿಹಾರವನ್ನು ಯಾವ ರೀತಿ ಮಾಡ್ಕೋಬೇಕು ಅಂತ ಅಂದರೆ ಮೊದಲಿಗೆ ನೀವು ದೇವರ ಫೋಟೋಗಳನ್ನು ಮಾರುವಂತಹ ಜಾಗಕ್ಕೆ ಹೋಗಿ ಹಾಯಾಗ್ರಿವ ದೇವರ ಫೋಟೋವನ್ನು ತೆಗೆದುಕೊಂಡು ಬರಬೇಕು ಹಯಗ್ರೀವ ಎಂದರೆ ಸಾಕ್ಷಾತ್ ನಾರಾಯಣ ಅವತಾರ ಎತ್ತಿರುವ ಒಂದು ಭಾಗವಾಗಿರುತ್ತದೆ.

ಹಯ ಎಂದರೆ ಕುದುರೆ ಗ್ರೀವ ಎಂದರೆ ಕಂಠ ಈ ರೀತಿಯ ಒಂದು ಅವತಾರವನ್ನು ಶ್ರೀಮಾನ್ ನಾರಾಯಣರವರು ಅವತಾರವನ್ನು ಮಾಡಿರುತ್ತಾರೆ. ನಾರಾಯಣನು ಬ್ರಹ್ಮನಿಗೆ ವೇದಗಳನ್ನು ಹೇಳಿದಂತಹ ಮಹಾನ್ ಸ್ವರೂಪಿ ಯನ್ನು ಹಾಯಾಗ್ರಿವ ಎಂದು ಕರೆಯುತ್ತಾರೆ. ರಾಕ್ಷಸರು ಒಂದುಬಾರಿ ಬ್ರಹ್ಮನ ಹತ್ತಿರ ವೇದಗಳನ್ನು ಕದ್ದುಕೊಂಡು ಹೋಗ್ ಬಿಟ್ಟಿದ್ದಾರೆ ಇದನ್ನು ತಂದುಕೊಟ್ಟವನೇ ಹಾಯಾಗ್ರಿವ. ಈ ದೇವರ ಫೋಟೋ ಮುಂದೆ ಒಂದು ಲೋಟದ ಅಲ್ಲಿಗೆ ಕೆಂಪು ಕಲ್ಲುಸಕ್ಕರೆ ವನ್ನು ಹಾಕಿ ದೇವರ ಮುಂದೆ ನೈವೇದ್ಯಕ್ಕೆ ಇಟ್ಟು ನಂತರ ಮಕ್ಕಳನ್ನು ಮಾಡಿಸಿ ಅದರ ಮುಂದೆ ಬಂದು ಓಂ ಗ್ರೀಂ ಹಯಗ್ರೀವ ನಮಹ ಎಂದು ಕೇವಲ ಐದು ಬಾರಿಯಾದರೂ ಜಪಿಸಿದರೆ.

ಒಳ್ಳೆಯದಾಗುತ್ತದೆ.ನಂತರ ಮಕ್ಕಳು ನೈವೇದ್ಯಕ್ಕೆ ಇಟ್ಟಿದ್ದನ್ನು ಸೇವಿಸಬೇಕು ಈ ರೀತಿಯಾಗಿ ಮಾಡಿದರೆ ಮಕ್ಕಳು ಉನ್ನತ ರೀತಿಯ ವ್ಯಾಸಂಗವನ್ನು ಪಡೆಯುತ್ತಾರೆ.ಭಾರತೀಯ ಪುರಾಣಗಳಲ್ಲಿ ವಿಷ್ಣುವಿನ ಹಯಗ್ರೀವ ಅವತಾರಕ್ಕೆ ವಿಶೇಷ ಮಹತ್ವವಿದೆ. ಹೆಸರೇ ಸೂಚಿಸುವಂತೆ ವಿಷ್ಣುವಿನ ಹಯಗ್ರೀವ ಅವತಾರ ಮನುಷ್ಯನ ದೇಹ, ಕುದುರೆಯ ತಲೆ ಹೊಂದಿದೆ. ವೈಷ್ಣವ ಸಂಪ್ರದಾಯದಲ್ಲಂತೂ ಹಯಗ್ರೀವರಿಗೆ ವಿಶೇಷ ಸ್ಥಾನವಿದ್ದು, ಪವಿತ್ರಗ್ರಂಥಗಳ ಅಧ್ಯಯನ ಪ್ರಾರಂಭಕ್ಕೂ ಮುನ್ನ ಹಯಗ್ರೀವನನ್ನು ಪ್ರಾರ್ಥಿಸಲಾಗುತ್ತದೆ. 

ಶ್ರಾವಣ ಮಾಸದಲ್ಲಿ ಬರುವ ಪೌರ್ಣಮಿಯಂದು ಹಯಗ್ರೀವ ಜಯಂತಿಯನ್ನು ಆಚರಿಸಲಾಗುತ್ತದೆ. ಇದಲ್ಲದೇ ಮಹಾನವಮಿಯಂದೂ ಹಯಗ್ರೀವವನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಪುರಾಣಗಳ ಪ್ರಕಾರ ಸೃಷ್ಠಿಯ ಪ್ರಾರಂಭದಲ್ಲಿ ಮಧು-ಕೈಟಭರೆಂಬ ಇಬ್ಬರು ರಾಕ್ಷಸರು ಬ್ರಹ್ಮನಿಂದ ವೇದಗಳನ್ನು ಕದಿಯುತ್ತಾರೆ. ವೇದಗಳನ್ನು ರಕ್ಷಿಸಲು ವಿಷ್ಣು ಹಯಗ್ರೀವ ಅವತಾರ ಪಡೆಯಬೇಕಾಗುತ್ತದೆ.

ಈ ಕತೆಯನ್ನು ಒಂದು ರೂಪಕವಾಗಿ ಪರಿಗಣಿಸುವುದಾದರೆ ಪರಿಶುದ್ಧ ಜ್ಞಾನ ಎಂಬ ಶ್ರೇಷ್ಠತೆಗೆ, ರಾಕ್ಷಸೀತನದ ಪ್ರತೀಕವಾದ  ಅಜ್ಞಾನವೆಂಬ ಕತ್ತಲೆಯ ವಿರುದ್ಧ  ಜಯ ಎಂಬ ಸಂದೇಶ ಇಲ್ಲಿ ದೊರಕುತ್ತದೆ. ವೇದಗಳನ್ನು ರಕ್ಷಿಸಿದ ಹಿನ್ನೆಲೆಯಲ್ಲಿ ಸ್ಪಟಿಕದಂತೆ ನಿರ್ಮಲ ಸ್ವರೂಪರಾದ ಶ್ರೀಹಯಗ್ರೀವರು ಸಕಲ ವಿದ್ಯೆ ಜ್ಞಾನಗಳ ಆಧಾರವಾಗಿರುವುದರಿಂದ ಹಯಗ್ರೀವನನ್ನು ಜ್ಞಾನದ ದೇವರೆಂದು ಪೂಜಿಸಲಾಗುತ್ತದೆ. ಅದಕ್ಕಾಗಿಯೇ ಜ್ಞಾನಾನಂದ-ಮಯಮ್ ದೇವಮ್ ನಿರ್ಮಲಸ್ಪಟಿಕಾಕೃತಿಮ್ ಆಧಾರಮ್ ಸರ್ವವಿದ್ಯಾನಾಮ್ ಹಯಗ್ರೀವಮ್ ಉಪಾಸ್ಮಹೆ || ಎಂಬ ಪ್ರಾರ್ಥನೆ ವಿದ್ಯಾರ್ಜನೆಗೆ ತೊಡಗುವವರ ನಾಲಿಗೆಯಲ್ಲಿ ಅನಾದಿಕಾಲದಿಂದಲೂ ನಲಿಯುತ್ತಿದೆ.

ಮಹಾವಿಷ್ಣುವಿಗೆ ಕುದುರೆಯ ಮುಖದ ಹಿನ್ನೆಲೆ:ಮಧು-ಕೈಟಭರೆಂಬ ರಾಕ್ಷಸರು ಬ್ರಹ್ಮನಿಂದ ವೇದಗಳನ್ನು ಕದ್ದು ರಾಕ್ಷಸ ಪ್ರವೃತ್ತಿಗಳಿನುಗುಣವಾಗಿ ಋಷಿಮುನಿಗಳ ನಾಶ, ಸುರರೊಡನೆ ಕಾದಾಟ ನಡೆಸುತ್ತಾರೆ. ಇಂಥಹ ಪರಿಸ್ಥಿತಿಗಳಲ್ಲಿ ಕಷ್ಟಬಂದಾಗ ಸಂಕಟಹರಣನಾದ ಮಹಾವಿಷ್ಣುವೇ ಗತಿ. ಹೀಗಾಗಿ  ದೇವತೆಗಳ ಪ್ರಾರ್ಥನೆಗೆ ಓಗೊಟ್ಟು ಮಹಾವಿಷ್ಣು ಅಸುರರೊಂದಿಗೆ ಯುದ್ಧ ನಡೆಸುತ್ತಾನೆ. ಸುದೀರ್ಘ ಅವಧಿಯವರೆಗೆ ಅಸುರರೊಂದಿಗೆ ಸೆಣೆಸಿದ  ಶ್ರೀಮನ್ನಾರಾಯಣನಿಗೂ ಬಳಲಿಕೆಗಳು ಮೂಡಿತ್ತು. ಹೀಗಾಗಿ ವೈಕುಂಠಕ್ಕೆ ಹಿಂದಿರುಗಿದ ಮಹಾವಿಷ್ಣುವು ಕೈಯಲ್ಲಿದ್ದ ಧನುಸ್ಸನ್ನೇ ದಿಂಬನ್ನಾಗಿಸಿಕೊಂಡು ಯೋಗ ನಿದ್ರೆಗೊಳಗಾದನು. ದೇವತೆಗಳೆಲ್ಲಾ ಧನುಸ್ಸಿನ ಝೇಂಕಾರ ಮಾಡಿ ವಿಷ್ಣುವನ್ನು ಎಚ್ಚರಗೊಳಿಸಲು ಯತ್ನಿಸಿದರು.

ಆ ಕ್ಷಣದಲ್ಲಿ ನಡೆದ ಅಚಾತುರ್ಯದಿಂದ  ಆ ಧನುಸ್ಸಿನ ಕಂಬಿ, ಯೋಗನಿದ್ರೆಯಲ್ಲಿದ್ದ ವಿಷ್ಣುವಿನ ಕತ್ತನ್ನು ಕೊಯ್ದಿತು. ವಿಷ್ಣುವಿನ ಕತ್ತೇ ಇಲ್ಲದಂತಹ ಪರಿಸ್ಥಿತಿ ದೇವತೆಗಳನ್ನು ಕಂಗಾಲಾಗಿಸಿತು. ಇದೀಗ ಸಹಾಯಕ್ಕೆ ಬಂದದ್ದು ಮಹಾಮಾಯೆ ದೇವಿಯಾದ ದುರ್ಗೆ. ದೇವತೆಗಳಿಗೆ ಭರವಸೆಯಿತ್ತ ತಾಯಿ ದುರ್ಗೆಯು,  ಶ್ವೇತ ಹಯದ ಮುಖವೊಂದನ್ನು  ವಿಷ್ಣುವಿನ ದೇಹಕ್ಕೆ ತಂದಿಡಲು ಆಣತಿಯಿತ್ತಳು ತದನಂತರ ಯೋಗನಿದ್ರೆಯಿಂದ ಹೊರ ಬಂದ ವಿಷ್ಣು ಅಸುರರನ್ನು ಸಂಹರಿಸಿ ಸಂಹರಿಸಿ, ವೇದಗಳನ್ನು ಸಂರಕ್ಷಿಸಿ  ಹಯಗ್ರೀವದೇವನಾದನು.

ವೈಷ್ಣವ ಗುರು ರಾಮಾನುಜಾಚಾರ್ಯರು ಒಮ್ಮೆ ತಮ್ಮ ಬ್ರಹ್ಮಸೂತ್ರ ಭಾಷ್ಯವನ್ನು ಸರಸ್ವತೀದೇವಿಯ ದೇಗುಲದಲ್ಲಿ ದೇವರ ಎದುರು ಮಂಡಿಸಿದರಂತೆ. ಇವರ ಈ ಮಹಾ ಭಾಷ್ಯವನ್ನು ಕೇಳಿ ಸಂಪ್ರೀತಗೊಂಡ ಮಾತೆ ಅದಕ್ಕೆ ಅದಕ್ಕೆ “ಶ್ರೀಭಾಷ್ಯಂ” ಎಂದು ಹೆಸರಿಸಿ, ಯತಿರಾಜರಿಗೆ ಚತುರ್ಭುಜ ಭೂಷಿತನಾದ, ಶ್ವೇತವಸ್ತ್ರಧಾರಿ, ಶ್ವೇತಾಶ್ವಮುಖಿ, ಬಿಳಿಯ ಕಮಲ ಪುಷ್ಪದಲ್ಲಿ, ಕಾಲಿಗೆ ಗೆಜ್ಜೆಕಟ್ಟಿ, ಎರಡು ಕೈಯಲ್ಲಿ ಶಂಕು, ಚಕ್ರ, ಒಂದು ಕೈಯಲ್ಲಿ ಪುಸ್ತಕ ಮತ್ತೊಂದು ಕೈಯಲ್ಲಿ ಜಪಮಾಲೆ ಧರಿಸಿ, ಪತ್ನಿ ಲಕುಮಿಯೊಡನೆ ಆಸೀನನಾದ ಹಯಗ್ರೀವ ಮೂರ್ತಿಯನ್ನಿತ್ತಳಂತೆ.ಹೀಗೆ ಹಯಗ್ರೀವನಿಗೆ ಸಂಬಂಧಿಸಿದಂತೆ ಅನೇಕ ಪೌರಾಣಿಕ ಉಲ್ಲೇಖಗಳಿವೆ. ಹಯಗ್ರೀವ ಅವತಾರ ಕೇವಲ ಹಿಂದೂಗಳಿಗೆ ಮಾತ್ರವಲ್ಲದೆ  ಬೌದ್ಧರಿಗೂ ಪ್ರಿಯನಾಗಿದ್ದಾನೆ ಎನ್ನಲಾಗಿದೆ. 

Leave a Comment