ಮಲಬದ್ಧತೆ ಸಮಸ್ಸೆ ಇದ್ದವರು ತಿಳಿಯಲೇಬೇಕಾದ ವಿಷಯಗಳಿವು!

Constipation :ಇಂದಿನ ದಿನಗಳಲ್ಲಿ ಬಹಳಷ್ಟು ಜನರು ತಮ್ಮ ಕೆಟ್ಟ ಜೀವನ ಶೈಲಿ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿಯ ಕಾರಣದಿಂದ ಮಲಬದ್ಧತೆಯಂತಹ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.ಅದರಲ್ಲೂ ಸರಿಯಾಗಿ ನೀರು ಕುಡಿಯದೇ ಇರುವವರಲ್ಲಿ ಹಾಗೂ ನಾರಿನಾಂಶ ಇರುವ ಆಹಾರ ಗಳನ್ನು ಕಡೆಗಣಿಸುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ.ಒಂದು ವೇಳ ಈ ಸಮಸ್ಯೆಯನ್ನು ಹಾಗೆಯೇ ನಿರ್ಲಕ್ಷ್ಯ ಮಾಡುತ್ತಾ ಹೋದರೆ, ಮುಂದಿನ ದಿನಗಳಲ್ಲಿ ಅಜೀರ್ಣ ಸಮಸ್ಯೆಗಳು ಕಂಡುಬಂದು, ಹೊಟ್ಟೆ ನೋವು ಮಾತ್ರವಲ್ಲದೆ ಹೊಟ್ಟೆಗೆ ಸಂಬಂಧ ಪಟ್ಟಂತೆ ಇನ್ನಿತರ ಸಮಸ್ಯೆಗಳು ಎದುರಾಗುತ್ತವೆ.

ಬನ್ನಿ ಇಂದಿನ ಲೇಖನದಲ್ಲಿ ಆಯುರ್ವೇದ ತಜ್ಞೆ ಡಾ. ದೀಕ್ಷಾ ಭಾವ್ಸರ್ ಅವರು, ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುವುದು ಹೇಗೆ ಎನ್ನುವುದರ ಬಗ್ಗೆ ಸರಳವಾದ ಮಾಹಿತಿಯನ್ನು ತಮ್ಮ ಇನ್‌ ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌‌ನಲ್ಲಿ ಹಂಚಿಕೊಂಡಿದ್ದಾರೆ. ಅವು ಯಾವುದು ಎನ್ನುವುದನ್ನು ನೋಡೋಣ ಬನ್ನಿ..

ಖರ್ಜೂರ

ನಮಗೆಲ್ಲಾ ಗೊತ್ತೇ ಇರುವ ಹಾಗೆ ಡ್ರೈ ಫ್ರೂಟ್ಸ್‌ಗಳು, ಬೆಲೆಯಲ್ಲಿ ದುಬಾರಿ ಎನ್ನುವ ಒಂದೇ ಕಾರಣ ಬಿಟ್ಟರೆ ಎಂದಿಗೂ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯ ಆಹಾರ ಪದಾರ್ಥಗಳು. ಇವುಗಳಿಂದ ಆರೋಗ್ಯಕ್ಕೆ ಯಾವುದೇ ಅಡ್ಡಪರಿಣಾಮಗಳು ಇರುವುದಿಲ್ಲ. ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ ಖರ್ಜೂರ.

ಮುಖ್ಯವಾಗಿ ಖರ್ಜೂರಗಳಲ್ಲಿ ನಾರಿನಾಂಶದ ಅಪಾರ ಪ್ರಮಾಣ ಅಧಿಕ ಪ್ರಮಾಣದಲ್ಲಿ ಕಂಡು ಬರುವುದ ರಿಂದ, ಜೀರ್ಣ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಕರುಳಿನ ಚಲನೆ ಉತ್ತಮ ಗೊಳ್ಳುವಂತೆ ನೋಡಿಕೊಂಡು, ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡುತ್ತದೆ.ಹೀಗಾಗಿ ಇದರ ಸಂಪೂರ್ಣ ಲಾಭ ಪಡೆಯಬೇಕು ಎಂದರೆ, ಪ್ರತಿದಿನ ಎರಡರಿಂದ-ಮೂರು ನೆನೆಸಿಟ್ಟ ಖರ್ಜೂರಗಳನ್ನು ಖಾಲಿ ಹೊಟ್ಟೆಗೆ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ, ಬಹಳ ಒಳ್ಳೆಯದು.

ಮೆಂತೆಕಾಳು

ಭಾರತೀಯ ಸಾಂಬಾರ ಪದಾರ್ಥಗಳಲ್ಲಿ ಒಂದಾಗಿರುವಂತಹ ಮೆಂತೆಕಾಳಿನಲ್ಲಿ ಹಲವಾರು ಬಗೆಯ ಔಷಧೀಯ ಗುಣಗಳು ಅಡಗಿರುವ ವಿಚಾರ ನಮಗೆಲ್ಲಾ ಗೊತ್ತೇ ಇದೆ. ನೋಡಲು ಸಣ್ಣದಾಗಿ ಕಾಣುವ ಈ ಪುಟ್ಟ ಕಾಳುಗಳಲ್ಲಿ ಅಗಾಧ ಪ್ರಮಾಣದ ನಾರಿನಾಂಶ ಕಂಡ ಬರುವುದರಿಂದ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುವಲ್ಲಿ ತುಂಬಾನೇ ಪ್ರಮುಖ ಪಾತ್ರವಹಿಸುತ್ತದೆ.

ರಾತ್ರಿ ಮಲಗುವ ಮುನ್ನ, ಒಂದು ಟೀ ಚಮಚ ಆಗುವಷ್ಟು ಮೆಂತೆ ಬೀಜಗಳನ್ನು ನೀರಿನಲ್ಲಿ ನೆನೆ ಸಿಟ್ಟು, ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಗೆ, ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ಬಹಳ ಒಳ್ಳೆಯದು. ಇಲ್ಲಾಂದ್ರೆ ಒಂದು ಟೇಬಲ್ ಚಮಚ ಮೆಂತೆ ಕಾಳುಗಳನ್ನು 2 ಗ್ಲಾಸ್ ನೀರಿನಲ್ಲಿ ನೆನೆಹಾಕಿ. ಇಡೀ ರಾತ್ರಿ ಹಾಗೆ ಬಿಟ್ಟು ಬೆಳಗ್ಗೆ ಎದ್ದು ಸೋಸಿಕೊಂಡು ಖಾಲಿ ಹೊಟ್ಟೆಯಲ್ಲಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ .ಇಲ್ಲದಿದ್ದರೆ ಹೀಗೂ ಮಾಡಬಹುದು, ರಾತ್ರಿ ಮಲಗುವ ಮುನ್ನ ಒಂದು ಚಮಚ ಆಗುವಷ್ಟು ಮೆಂತೆ ಪುಡಿಯನ್ನು ನೀರಿನಲ್ಲಿ ಮಿಕ್ಸ್ ಮಾಡಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ

ತುಪ್ಪ

ಹಾಲಿನ ಉಪ ಉತ್ಪನ್ನದಲ್ಲಿ ತುಪ್ಪವು ಕೂಡ ಒಂದಾಗಿದೆ. ಬೆಣ್ಣೆಯನ್ನು ಕರಗಿಸಿದ ಬಳಿಕ ತುಪ್ಪ ತಯಾರಿಸಲಾಗುತ್ತದೆ. ತನ್ನಲ್ಲಿ ಅಗಾಧ ಪ್ರಮಾಣದ ಪೌಷ್ಟಿಕಸತ್ವಗಳನ್ನು ಹೊಂದಿರುವ ಜೊತೆಗೆ ವಿಟಮಿನ್ ಎ, ಇ ಮತ್ತು ಡಿ, ಆಂಟಿಆಕ್ಸಿಡೆಂಟ್‌ಗಳು, ಇದರಲ್ಲಿ ಹೇರಳವಾಗಿ ಕಂಡು ಬರುವುದರಿಂದ, ಮನುಷ್ಯನ ಆರೋಗ್ಯಕ್ಕೆ ಇದು ಬಹಳ ಒಳ್ಳೆಯದು.ಇನ್ನು ಮಲಬದ್ಧತೆ ಸಮಸ್ಯೆ ಇರುವವರು, ಉಗುರು ಬೆಚ್ಚಗಿನ ಹಾಲಿಗೆ, ಒಂದು ಟೇಬಲ್ ಚಮಚ ದಷ್ಟು ತುಪ್ಪವನ್ನು ಬೆರೆಸಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ, .

ನೆಲ್ಲಿಕಾಯಿ

ಹಿಂದಿನ ಕಾಲದಿಂದಲೂ ಕೂಡ ಅಷ್ಟೇ, ನಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ಒದಗಿಸಿ ಕೊಡುವಲ್ಲಿ ಬೆಟ್ಟದ ನೆಲ್ಲಿಕಾಯಿ ಪಾತ್ರವನ್ನು ಮರೆಯುವಂತಿಲ್ಲ.ಕೂದಲುದುರುವ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರಿಗೆ ಇದರ ಪಾತ್ರ ಮರೆಯುವ ಹಾಗಿಲ್ಲ. ಪ್ರತಿದಿನ ಒಂದು ಟೇಬಲ್ ಆಗುವಷ್ಟು, ನೆಲ್ಲಿಕಾಯಿ ಪೌಡರ್ ಅಥವಾ ಮೂರು ತಾಜಾ ನೆಲ್ಲಿಕಾಯಿಯ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.

Leave a Comment