ಹುಣ್ಣಿಮೆಯ ದಿನ ಈ ಪ್ರಯೋಗ ಮಾಡಿ ಸಾಲದ ರೂಪದಲ್ಲಿ ಬೇರೆಯವರಿಗೆ ಕೊಟ್ಟಂತ ಹಣ ನಿಮ್ಮ ಕೈ ಸೇರುತ್ತದೆ!

ಸಾಲದ ರೀತಿ ಯಾರಿಗಾದರೂ ದುಡ್ಡು ಕೊಟ್ಟಿದ್ದರೆ ಆ ದುಡ್ಡು ನಿಮ್ಮ ಕೈ ಸೇರಬೇಕು ಎಂದರೆ ಈ ರೀತಿಯಾಗಿ ಮಾಡಿ. ಹುಣ್ಣಿಮೆ ದಿನ ತಾಂತ್ರಿಕ ಪ್ರಯೋಗ ಮಾಡಿದರೆ ಕೆಲವೇ ದಿನಗಳಲ್ಲಿ ನಿಮ್ಮ ದುಡ್ಡು ನಿಮ್ಮ ಕೈ ಸೇರುತ್ತದೆ. ಎಷ್ಟೋ ಜನರು ಸಾಲವಾಗಿ ಕೊಟ್ಟ ಹಣ ವಾಪಾಸ್ ಬರೋದೇಯಿಲ್ಲ. ದುಡ್ಡು ಇದ್ದರು ಸಹ ವಾಪಾಸ್ ಕೊಡದೆ ಇರುವ ಜನರು ಇದ್ದರೆ. ಈ ರೀತಿ ನೀವು ಕೊಟ್ಟ ಹಣ ವಾಪಾಸ್ ಕೊಡದೆ ಇರುವವರ ಮೇಲೆ ನೀವು ಈ ತಾಂತ್ರಿಕ ಪ್ರಯೋಗವನ್ನು ಮಾಡಬಹುದು.

ಹುಣ್ಣಿಮೆ ದಿನ ಶುಭ ಮುಂಜಾನೆ ಒಂದು ದಪ್ಪನೆ ತೆಂಗಿನಕಾಯಿ ತೆಗೆದುಕೊಂಡು ಶುದ್ಧ ನೀರಿನಲ್ಲಿ ನಾರು ತೆಗೆದು ತೆಂಗಿನಕಾಯಿ ತೊಳೆಯಬೇಕು. ನಂತರ ಸ್ವಸ್ತಿಕ್ ಚಿಹ್ನೆಯನ್ನು ತೆಂಗಿನಕಾಯಿ ಮೇಲೆ ಬರೆಯಬೇಕು. ನಂತರ ಕೆಂಪು ಬಟ್ಟೆ ಮತ್ತು ಕೆಂಪು ನೂಲಿನ ದಾರ ತೆಗೆದುಕೊಳ್ಳಿ ತೆಂಗಿನಕಾಯಿ ಮೇಲೆ ದಾರ ಕಟ್ಟಿ ಮತ್ತು ತೆಂಗಿನಕಾಯಿಯನ್ನು ಅದರ ಕೆಂಪು ಬಟ್ಟೆ ಒಳಗೆ ಇಟ್ಟು ಕಟ್ಟಬೇಕು.

ಇದನ್ನು ದೇವರ ಮನೆಯಲ್ಲಿ ಇಟ್ಟು ಪೂಜೆಯನ್ನು ಮಾಡಬೇಕು. ನಂತರ ನಾನು ಕೊಟ್ಟ ಹಣ ನನ್ನ ಕೈ ಸೇರಬೇಕು ಮತ್ತು ನನ್ನ ಕುಟುಂಬ ಸದೃಢ ಆಗಬೇಕು.ಈ ದಿನ ಸಾತ್ವಿಕ ಆಹಾರವನ್ನು ಸೇವನೆ ಮಾಡಬೇಕು. ಸಂಜೆ ಸಮಯದಲ್ಲಿ ಇದನ್ನು ಹರಿಯುವ ನೀರಿಗೆ ಹಾಕಬೇಕು. ಹರಿಯುವ ನೀರು ಇಲ್ಲವಾದರೆ ಬಿಳಿ ಏಕ್ಕದ ಗಿಡದ ಹತ್ತಿರ ಇಡಬೇಕು. ಈ ರೀತಿ ಮಾಡಿ ಮನೆಗೆ ಬರುವಾಗ ಬಿಳಿ ಸಾಸಿವೆ ತೆಗೆದುಕೊಂಡು ಮನೆ ಎಲ್ಲಾ ಕಡೆ ಚೆಲ್ಲಬೇಕು. ಈ ರೀತಿ ಮಾಡಿದರೆ ನೀವು ಕೊಟ್ಟ ಹಣ ನಿಮ್ಮ ಕೈ ಬಂದು ಸೇರುತ್ತದೆ.

Leave a Comment