ಯಾರಾದರೂ ಈ 5 ವಸ್ತುಗಳನ್ನು ಕೊಟ್ಟರೆ ನಿರಾಕರಿಸದೆ ತೆಗೆದುಕೊಳ್ಳಿ ಅದೃಷ್ಟ ಬರುತ್ತೆ!

ಯಾರಾದರೂ ನಿಮಗೆ ಈ ಐದು ವಸ್ತುಗಳನ್ನು ಕೊಟ್ಟರೆ ನಿರಾಕರಿಸಲೇಬಾರದು ತೆಗೆದುಕೊಳ್ಳಬೇಕು ಎನ್ನುವ ಕುತೂಹಲಕಾರಿ ಮಾಹಿತಿಯನ್ನು ಈ ದಿನ ನಾವು ನಿಮಗೆ ತಿಳಿಸಿಕೊಡುತ್ತೇವೆ ಸ್ನೇಹಿತರೆ ಅದೃಷ್ಟ ಅಥವಾ ಲಕ್ ಎನ್ನುವುದು ಯಾವಾಗ ಬರುತ್ತೆ? ಹೇಗ್ ಬರುತ್ತೆ ಯಾವಾಗ ಹೋಗುತ್ತೆ ಎನ್ನುವುದು ಗೊತ್ತಾಗುವುದೇ ಇಲ್ಲ ಅದೃಷ್ಟ ನಮ್ಮ ಸುತ್ತಮುತ್ತ ಇದ್ದರು ನಮಗೆ ತಿಳಿಯುವುದಿಲ್ಲ ಅದಕ್ಕೆ ಅಲ್ಲವೇ ಹೇಳುವುದು ಅದೃಷ್ಟ ಎನ್ನುವುದು ಯಾವ ಸಮಯದಲ್ಲಿ ಯಾವ ರೂಪದಲ್ಲಿ ಬರುತ್ತದೆ ಎನ್ನುವುದನ್ನು ಯಾರಿಂದಲೂ ಊಹೆ ಮಾಡುವುದಕ್ಕೆ ಸಾಧ್ಯವಿಲ್ಲವೆಂದು

ಹೌದು ಕಡು ಬಡವನಾಗಿದ್ದ ಮನುಷ್ಯ ಒಂದೇ ದಿನದಲ್ಲಿ ದೊಡ್ಡ ಶ್ರೀಮಂತನಾದ ಅದೆಷ್ಟು ಘಟನೆಗಳನ್ನು ನಾವು ನೀವೆಲ್ಲ ಖಂಡಿತ ನೋಡಿದ್ದೇವೆ ಒಬ್ಬ ಮನುಷ್ಯ ಶ್ರೀಮಂತನಾಗುವುದಕ್ಕೆ ಅಥವಾ ಬಡವನಾಗುವುದಕ್ಕೆ ಬಹಳ ಸಮಯ ಬೇಕಾಗಿಲ್ಲ ಅದೇ ರೀತಿ ಅದೃಷ್ಟ ಮತ್ತು ದುರಾದೃಷ್ಟ ಎನ್ನುವುದು ಪ್ರತಿಯೊಬ್ಬರ ಹಣೆಬರಹದಲ್ಲಿ ಈಗಾಗಲೇ ನಿರ್ಧಾರವಾಗಿರುತ್ತದೆ

ಅದೃಷ್ಟ ಇದ್ದರೆ ಒಬ್ಬ ಭಿಕ್ಷುಕ ರಾತ್ರಿ ಕಳೆದು ಬೆಳಗಾಗುವುದರಲ್ಲಿ ಶ್ರೀಮಂತನಾಗಿಬಿಡುತ್ತಾನೆ ಮತ್ತು ದುರಾದೃಷ್ಟ ಬೆನ್ನೆತ್ತಿದರೆ ಸಿರಿವಂತ ಕೂಡ ಬೀದಿಗೆ ಬಿಡಬಹುದು ಇನ್ನು ಜೀವನದಲ್ಲಿ ಕೆಲವೊಂದು ಸೂಚನೆಗಳು ಅಥವಾ ಕೆಲವೊಂದು ಲಕ್ಷಣಗಳು ನಿಮಗೆ ಮುಂದಿನ ದಿವಸಗಳಲ್ಲಿ ಬಾರಿ ಅಗಾಧವಾದ ಅದೃಷ್ಟ ಒದಗಿ ಬರಲಿದೆ ಎನ್ನುವುದನ್ನು ತಿಳಿಸುತ್ತದೆ ಆ ಸೂಚನೆಗಳು ಯಾವುವು ಎನ್ನುವುದನ್ನು ಈಗ ತಿಳಿದುಕೊಳ್ಳೋಣ ಬನ್ನಿ

ನಿಮಗೇನಾದರೂ ಬೆಳಗ್ಗೆ ಎದ್ದ ತಕ್ಷಣ ಗೋವಿನ ದರ್ಶನ ಅಥವಾ ಮುತ್ತೈದೆಯರ ದರ್ಶನವಾದರೆ ಅಥವಾ ಇನ್ನು ಕೆಲವರಿಗೆ ಕೆಲವು ನಿರ್ದಿಷ್ಟ ವ್ಯಕ್ತಿಗಳ ದರ್ಶನವಾದರೆ ಆ ದಿನಪೂರ್ತಿ ಬಹಳ ಲಾಭದಾಯಕವಾಗಿರುತ್ತದೆ ಅದೇ ರೀತಿ ನೀವೇನಾದರೂ ಕೆಲಸದ ನಿಮಿತ್ತ ಆಚೆ ಹೋಗುವಾಗ ತುಂಬಿದ ಕೊಡದ ನೀರು ಕಂಡರೆ ಅಥವಾ ಪಾತ್ರೆಯಲ್ಲಿ ಸಂಪೂರ್ಣವಾಗಿ ತುಂಬಿರೋ ಹಾಲನ್ನು ಕಂಡರೆ ಆ ದೃಶ್ಯ ಕೂಡ ನಿಮಗೆ ಅದೃಷ್ಟವನ್ನು ತರುವ ಮುನ್ಸೂಚನೆಯಾಗಿರುತ್ತದೆ

ಆದ್ದರಿಂದ ನಿಮಗೇನಾದರೂ ಇಂತಹ ಕೆಲವೊಂದು ಲಕ್ಷಣಗಳು ಅಥವಾ ಸನ್ನಿವೇಶಗಳು ಕಂಡು ಬಂದರೆ ಮುಂದಿನ ದಿವಸಗಳಲ್ಲಿ ಅದು ನಿಮಗೆ ಬಹಳ ಉತ್ತಮವಾದ ಸಮಯ ಬರಲಿದೆ ಎನ್ನುವುದನ್ನು ತಿಳಿಸುತ್ತದೆ ಅದೇ ರೀತಿ ಇನ್ನೊಂದು ಸೂಚನೆ ಎಂದರೆ ನಿಮ್ಮ ಮನೆ ಮುಂದೆ ಅಕಸ್ಮಾತಾಗಿ ಬೆಕ್ಕು ಮರಿ ಹಾಕಿದ್ರೆ ಅದು ಕೂಡ ನಿಮಗೆ ಅದೃಷ್ಟ ತುರುವ ಸಂಕೇತವಾಗಿರುತ್ತದೆ

ಇನ್ನು ಕೆಲವೊಮ್ಮೆ ಕೆಲವೊಂದು ಪಕ್ಷಿಗಳು ಬೆಳಗ್ಗೆ ಎದ್ದ ಕೂಡಲೇ ನಿಮ್ಮ ಕಣ್ಣಿಗೆ ಕಾಣಿಸಿಕೊಂಡರೆ ಅದು ಕೂಡ ಒಳ್ಳೆಯ ಸೂಚನೆ, ಹಾಗೆ ನಿಮ್ಮಲ್ಲಿಯೇ ಏನೋ ಬದಲಾವಣೆ ಆಗಿರುವ ಹಾಗೆ ಅನಿಸಿದರೆ ಉದಾಹರಣೆಗೆ ಆ ದಿನ ಬೆಳಿಗ್ಗೆ ಏಳುತ್ತಿದ್ದ ಹಾಗೆ ಖುಷಿಯಾದ ಅನುಭವ ಆಗುತ್ತಿದ್ದರೆ ಅದು ನಿಮಗೆ ಮುಂದಿನ ದಿವಸಗಳಲ್ಲಿ ಒಳ್ಳೆಯ ಸಮಯ ಎದುರಾಗಲಿದೆ ಎನ್ನುವುದರ ಸಂಕೇತ ಆಗಿರುತ್ತದೆ

ಇನ್ನು ಬೆಳಗ್ಗೆ ಏಳುತ್ತಿದ್ದ ಹಾಗೆ ಕೆಲವರಿಗೆ ಧನ ಪ್ರಾಪ್ತಿ ಆಗುವುದು ಅಥವಾ ಆಕಸ್ಮಿಕ ಧನ ಲಾಭ ಉಂಟಾಗುವುದು ಆಗುತ್ತದೆ ಇದು ಸಹ ಸುಖ ಸುಮ್ಮನೆ ಆಗಿರುವುದಿಲ್ಲ ಬದಲಾಗಿ ಮುಂದಿನ ದಿನಗಳಲ್ಲಿ ನಿಮಗೆ ಅದೃಷ್ಟ ಒಲಿದು ಬರುತ್ತದೆ ಎನ್ನುವುದರ ಸೂಚನೆಯಾಗಿದೆ ಈ ರೀತಿ ಕೆಲವರಿಗೆ ಒಳ್ಳೆಯ ಸಮಯ ಬರುವ ಮುನ್ನ ಅಥವಾ ಅದೃಷ್ಟ ಬರುವ ಮುನ್ನ ಅಥವಾ ಸಂತೋಷದ ದಿನಗಳು ಬರುವ ಮುನ್ನ ಕೆಲವೊಂದು ಮುನ್ಸೂಚನೆಗಳು ಸಿಗುತ್ತವೆ

ಕೆಲವು ವಸ್ತುಗಳು ಯಾವಾಗ ಎಲ್ಲಿ ಸಿಕ್ಕರು ನಿರಾಕರಿಸಬಾರದು ಅಂತಹ ವಸ್ತುಗಳು ಯಾವುವು ಎನ್ನುವುದನ್ನು ತಿಳಿಯೋಣ,

ಮೊದಲನೆಯದು ಶಿವನ ಪ್ರಸಾದ :- ಪೂಜೆಯ ವೇಳೆ ದೇವರಿಗೆ ಅರ್ಪಿಸಿದ ನೈವೇದ್ಯವನ್ನು ಪೂಜೆಯ ಬಳಿಕ ಭಕ್ತರಿಗೆ ಹಂಚಿದಾಗ ಅದನ್ನು ದೇವರ ಪ್ರಸಾದ ಎಂದು ಭಕ್ತಿಯಿಂದ ಸ್ವೀಕರಿಸಬೇಕು

ಹಾಗಾಗಿ ದೇವರಿಗೆ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ಇಡುವ ಪ್ರಸಾದವನ್ನು ಪೂಜೆಯ ನಂತರ ಯಾರಾದರೂ ನಿಮಗೆ ಕೊಟ್ಟರೆ ಅದನ್ನು ಯಾವುದೇ ಕಾರಣಕ್ಕೂ ನಿರಾಕರಿಸಬಾರದು ಇಲ್ಲದಿದ್ದರೆ ಭಗವಂತನ ಕೋಪಕ್ಕೆ ನೀವು ಪೂಜೆಯಲ್ಲಿ ಭಾಗವಹಿಸಿಲ್ಲ ಎಂದರು ನಿಮಗೆ ಈಶ್ವರನ ಪ್ರಸಾದ ಲಭ್ಯವಾದರೆ ನಿಮ್ಮ ಮೇಲೆ ಸಾಕ್ಷಾತ್ ಆಶೀರ್ವಾದವಿದೆ ಎಂದು ಅರ್ಥ ಹಾಗಾಗಿ ಅಂತಹ ಪ್ರಸಾದವನ್ನು ನಿರಾಕರಿಸುವುದು ದೊಡ್ಡ ತಪ್ಪಾಗುತ್ತದೆ.

Leave a Comment