ವಾಸ್ತವಾಗಿ ವಾಸ್ತು ಎಷ್ಟ ರ ಮಟ್ಟಿಗೆ ಸರಿ!

ವಾಸ್ತು ಶಬ್ದಕ್ಕೆ ವಾಸಿಸಲು ಯೋಗ್ಯವಾದಂತ ಒಂದು ಪ್ರದೇಶ ಎನ್ನುವ ಅರ್ಥ ಇದೆ. ವಾಸ್ತು ಎನ್ನುವ ಶಬ್ದವು ಜ್ಞಾನ ಮತ್ತು ವಿಜ್ಞಾನದ ಒಂದು ಆಳವಾದ ಅಧ್ಯಯನ ಹಾಗೂ ಭೂಮಿಯನ್ನು ಅಲಂಕರಿಸುವ ಒಂದು ಶಾಸ್ತ್ರವೂ ಹೌದು. ಈ ಭೂ ಅಲಂಕಾರದಲ್ಲಿ ಪಂಚಮಹಾಭೂತಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಅಳವಡಿಸಿಕೊಂಡು ಅಲಂಕರಿಸುವುದೇ ವಾಸ್ತುಶಾಸ್ತ್ರ. ಮೇಲೆ ತಿಳಿಸಿದಂತೆ ಪಂಚಭೂತಗಳನ್ನು ಅರಿತುಕೊಳ್ಳುವುದೇ ಜ್ಞಾನ ಹಾಗೂ ಈ ಅರಿತುಕೊಂಡ ಜ್ಞಾನವನ್ನು ಉಪಯೋಗಿಸಿಕೊಳ್ಳುವುದೇ ವಿಜ್ಞಾನ.

ಭೂಮಿಯು ಒಂದು ದುಂಡಾದ ಆಕೃತಿಯನ್ನು ಪ್ರತಿಬಿಂಬಿಸುತ್ತದೆ. ಹಾಗೂ ಉರುಳುತ್ತಿರುವ ಆಕೃತಿಯೇ ನಿಸರ್ಗ. ಸೂರ್ಯನ ಸುತ್ತ ಉರುಳುವಾಗ, ಸೂರ್ಯನ ಎದುರಿನ ಭಾಗ ಬೆಳಕು ಹಾಗೂ ಹಿಂದಿನಭಾಗ ನೆರಳನ್ನು ಹೊಂದಿರುತ್ತದೆ. ಈ ಆಕೃತಿಯನ್ನೇ ಚೀನಿಯರು ಫೇಂಗ್-ಸುಯೀ ಎಂಬ ವಾಸ್ತುವಿನ ಚೆಹ್ನೆಯಾಗಿ ಉಪಯೋಗಿಸಿಕೊಂಡಿದ್ದಾರೆ. ಅವರು ಈ ಚಿಹ್ನೆಯಲ್ಲಿ ಎರಡು ಭಾಗಗಳನ್ನಾಗಿಸಿಕೊಂಡು ಗಾಳಿ ಹಾಗೂ ನೀರನ್ನು ಈ ನಿಸರ್ಗವೆನ್ನುವರು. ಇದನ್ನು ನಮ್ಮ ಜೀವನದಲ್ಲಿ ಹೇಗೆ ಅವಳವಡಿಸಿಕೊಳ್ಳುವುದೆಂಬುದೇ ಈಗಿನ ಮುಂದಿನ ಪ್ರಶ್ನೆಯಾಗಿದೆ.

ವಾಸ್ತು ಅಭಿವೃದ್ಧಿ ಕಲೆಗಳು

ಪಾಶ್ಚಿಮಾತ್ಯ ಕಲಾವಿದರು ಹಾಗೂ ಭಾರತೀಯ ವಾಸ್ತುಶಾಸ್ತ್ರ ಮತ್ತು ಚೀನಿಯರ ಫೇಂಗ್-ಸುಯೀ ವಿದ್ಯೆಯನ್ನು ಅರಿತು ಸಾರ್ವಜನಿಕರ ಅಭಿವೃದ್ಧಿಗೆ ಕಲಾಕೃತಿಗಳನ್ನು ರಚಿಸುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂಬುದು ತಿಳಿಯೋಣ.

ಸಾಮಾನ್ಯವಾಗಿ ಇಂದಿನ ಮನೆಗಳಲ್ಲಿ ಆಗ್ನೇಯದಲ್ಲಿ ಅಡುಗೆಮನೆ, ಕುಬೇರ ಮೂಲೆಯಲ್ಲಿ ದೇವರ ಮನೆ ಇರಿಸುವುದಷ್ಟೇ ವಾಸ್ತು ಎಂದು ಅರಿತುಕೊಂಡಿದ್ದಾರೆ. ಇದು ನಿಜವೇ ಹಾಗೂ ಇಂದಿನ ವಾಸ್ತು ಶಿಲ್ಪಿಗಳು ತಿಳಿಯುವುದು ಅದನ್ನಷ್ಟೇ. ಆದರೆ ಇದರ ಇನ್ನೂ ಸ್ವಲ್ಪ ಆಳವಾದ ಅಧ್ಯಯನದಿಂದ ತಿಳಿದುಬರುವುದು, ಆಗ್ನೇಯದಲ್ಲಿ ಅಗ್ನಿ ಇರುವುದಂತೂ ನಿಜ. ಆದರೆ ಅದನ್ನು ನೀರಿನೊಂದಿಗೆ ಸಮವಾಗಿ ತೂಗಬೇಕು. ಅದು ಸರಿಯಾದ ವಾಸ್ತುಶಾಸ್ತ್ರ.

ಪ್ರಥಮವಾಗಿ ಕೆನಡಾದ ಕಲಾವಿದ ಜೇನಿನ್ ಗ್ರಿಮ್ಸ್‌ರ ಕೆಲ ಕಲಾಕೃತಿಗಳ ಬಗ್ಗೆ ತಿಳಿಯೋಣ. ನವ್ಯ ಕಲಾಕೃತಿಗಳು ತಿಳಿದುಕೊಳ್ಳುವುದು ಕಷ್ಟ. ಅವುಗಳನ್ನು ಓದಬೇಕು. ನವ್ಯ ಕಲಾಕೃತಿಗಳಲ್ಲಿ ಒಂದು ಬಿಂದುವಿಗೂ ಅರ್ಥವಿರುತ್ತದೆ. ಅಲ್ಲದೆ ರೇಖಾ ಚಿತ್ರಗಳಿಗೂ ಆಳವಾದ ಅರ್ಥವಿರುತ್ತದೆ. ಇವರ ಕಲಾಕೃತಿಯು ವಾಸ್ತು ಅಳವಡಿಸಿದಂತಹ ಭೂ ದೃಶ್ಯ ಕಲಾಕೃತಿ. ಉಕ್ಕಿನಲ್ಲಿ ತಯಾರಿಸಿದಂತಹ ಈ ಕಲಾಕೃತಿಯನ್ನು ಮನೆಯ ವಾಯುವ್ಯ ಭಾಗದಲ್ಲಿ ನೇತುಹಾಕಬೇಕು. ಈ ಕಲಾಕೃತಿಯ ಗವಾಯಶಕ್ತಿಯನ್ನು ಇದರಿಂದ ವೃದ್ಧಿಸಲು ಸಹಾಯಕವಾಗುತ್ತದೆ. ಅದು ಪ್ರದಕ್ಷಿಣಾಕಾರವಾಗಿ ಮತ್ತು ಅಪ್ರದಕ್ಷಿಣಾಕಾರವಾಗಿ ತಿರುಗುತ್ತಿರುತ್ತದೆ.

ನಮ್ಮ ದೇಹವನ್ನು ಜಾಗೃತಗೊಳಿಸಲು ನಾವು ಹೇಗೆ ಯೋಗಾಭ್ಯಾಸ ಮಾಡುತ್ತೇವೆಯೋ ಹಾಗೇ ನಿರ್ಸಗದಲ್ಲಿನ ಶಕ್ತಿಗಳನ್ನು ನಮ್ಮ ಬಳಕೆಗೆ ಯೋಗ್ಯವಾಗುವಂತೆ ಮಾರ್ಪಡಿಸಿಕೊಳ್ಳಲು ಈ ಕಲಾಕೃತಿಯ ಶಕ್ತಿಯನ್ನು ಬಳಸಿಕೊಳ್ಳಬಹುದು. ಈ ಕಲಾಕೃತಿಗಳನ್ನು ಹೇಗೆ ಯಾವ ಜಾಗದಲ್ಲಿ ನೇತು ಹಾಕಬೇಕು, ಯಾವ ಬಣ್ಣವನ್ನು ಅವಕ್ಕೆ ಬಳಸಬೇಕು ಎಲ್ಲವನ್ನೂ ನಾವು

ಮನನಮಾಡಿಕೊಳ್ಳಬೇಕು. ವಾಸ್ತು ಶಾಸ್ತ್ರದ ಪ್ರಕಾರ ವಾಯುವ್ಯ ದಿಕ್ಕಿನ ಮೂಲಧಾತುಗಳು ಲೋಹ, ಬಿಳಿ ಮಿಶ್ರಿತ ಬೂದಿ ಬಣ್ಣ ಹಾಗೂ ವಾಯು, ವಾಯುವ್ಯ ದಿಕ್ಕನ್ನು ಲೋಹಮಿಶ್ರಿತ ಕಲಾಕೃತಿಗಳಿಂದ ಸೌಂದರ್ಯಿಸಿದರೆ ಮಕ್ಕಳ ಅಭಿವೃದ್ಧಿ, ಜವಾಬ್ದಾರಿ, ನಾಯಕತ್ವಗುಣ, ಕಲ್ಪನಾಶಕ್ತಿ ಹಾಗೂ ವಿದೇಶ ಯೋಗಗಳು ಬೆಳೆಯುತ್ತವೆ.

ಹಿಡನ್ ಎನರ್ಜಿ

ಪಿರಮಿಡ್‌ನಲ್ಲಿ ಉತ್ಪತ್ತಿಯಾಗುವಂತಹ ಶಕ್ತಿಯನ್ನು ಹಿಡನ್ ಎನರ್ಜಿ ಎಂದು ಕರೆಯುತ್ತಾರೆ. ಇಟ್ಟಿಗೆಗಳಿಂದ ನಿರ್ಮಿಸಿದ ಈ ಕಲಾಕೃತಿಯ ಮಧ್ಯಭಾಗ ಮಾತ್ರ ಸಿಡಿದೆದಂತೆ ನಿರ್ಮಿಸಬೇಕು. ಅಂದರೆ ಒಳಗಿನಿಂದ ಯಾವುದೋ ಒಂದು ಶಕ್ತಿ ಹೊರಬರಲು ಪ್ರಯತ್ನಿಸುತ್ತಿದೆ ಎಂದು ನೋಡುತ್ತಲೇ ಗೋಚರಿಸುವಂತಿರಬೇಕು. ಇದನ್ನು ನಾವು ಅಗ್ನಿಶಕ್ತಿ ಎಂದೂ ಕರೆಯಬಹುದು.

Leave a Comment