ಆಲದ ಎಲೆಯಿಂದ ದುಡ್ಡಿನ ಸಮಸ್ಸೆ ದುಡಿಮೆ ಸಮಸ್ಸೆ ನಿವಾರಣೆ!

ಎಷ್ಟೋ ಜನರು ಈ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ, ಎಷ್ಟೇ ಕಷ್ಟಪಟ್ಟು ದುಡಿದರೂ ಕೂಡ ಹಣವು ಕೈಯಲ್ಲಿ ಉಳಿತಾಯ ಆಗುವುದಿಲ್ಲ ಸಂಬಳ ಬಂದ ದಿನವೇ ಹಣವು ಖರ್ಚಾಗಿ ಹೋಗುತ್ತದೆ ಇದರಿಂದ ಒಂದು ತಿಂಗಳ ಜೀವನ ನಡೆಸಲು ಕೂಡ ಸಾಲವನ್ನು ಮಾಡುವಂತಹ ಪರಿಸ್ಥಿತಿಯಲ್ಲಿ ಎಷ್ಟೋ ಜನರು ಇರುತ್ತಾರೆ, ಹಣದ ಗಳಿಕೆಗಿಂತ ಖರ್ಚೆ ಹೆಚ್ಚಾಗಿ ಇರುತ್ತದೆ,

ಈ ರೀತಿಯಾಗಿ ಅಧಿಕ ಖರ್ಚು ಎನ್ನುವುದು ಕಡಿಮೆಯಾಗಬೇಕು ಸಾಲದ ಸಮಸ್ಯೆ ಕಡಿಮೆಯಾಗಬೇಕು ದುಡಿದ ಹಣ ಕೈಯಲ್ಲಿ ಸ್ವಲ್ಪವಾದರೂ ಉಳಿತಾಯ ಆಗಬೇಕು ಎಂದರೆ ಆಲದ ಮರದ ಎಲೆಯಿಂದ ಈ ಒಂದು ಪರಿಹಾರವನ್ನು ಮಾಡಿಕೊಳ್ಳಬೇಕು, ಈ ರೀತಿ ಮಾಡುವುದರಿಂದ ನೀವು ಕಷ್ಟಪಟ್ಟು ದುಡಿದ ಹಣದಲ್ಲಿ ಸ್ವಲ್ಪವಾದರೂ ಹಣವನ್ನು ನೀವು ಉಳಿತಾಯ ಮಾಡಬಹುದು, ಹಾಗಾದರೆ ಆಲದ ಮರದ ಎಲೆಯಿಂದ ಯಾವ ಒಂದು ತಂತ್ರವನ್ನು ಯಾವ ರೀತಿ ಮಾಡಬೇಕು ಎಂದು ನೋಡೋಣ. ಈ ಒಂದು ಪರಿಹಾರವನ್ನು ಮಾಡುವ ದಿನ ನೀವು ಮುಂಜಾನೆ ಎದ್ದು ಮನೆಯನ್ನು ಸ್ವಚ್ಛಗೊಳಿಸಿ ನೀವು ಸ್ನಾನ ಮಾಡಿ ಮಡಿಯಾಗಿ ಇರಬೇಕು,

ನಂತರ ದೇವರಿಗೆ ದೀಪಾರಾಧನೆ ನೀನು ಮಾಡಿ ಮಹಾಲಕ್ಷ್ಮಿದೇವಿ ಮತ್ತು ದುರ್ಗಾದೇವಿಯನ್ನು ಸಂಕಲ್ಪ ಮಾಡಿಕೊಂಡು ಒಂದು ಪರಿಹಾರವನ್ನು ಮಾಡಬೇಕು. ಈ ದಿನ ವಿಶೇಷವಾಗಿ ದುರ್ಗಾದೇವಿ ಆರಾಧನೆಯನ್ನು ಮಾಡಿ ದೇವಿಗೆ ಸಿಹಿ ಪದಾರ್ಥವನ್ನು ನೈವೇದ್ಯವಾಗಿ ಇಟ್ಟು ಈ ಒಂದು ಪರಿಹಾರವನ್ನು ಮಾಡಬೇಕು. ಮೊದಲಿಗೆ ಆಲದ ಮರದ ಎಲೆಯನ್ನು ಮನೆಗೆ ತಂದು ಇಟ್ಟುಕೊಂಡಿರಬೇಕು, ಅದನ್ನು ನೀರಿನಿಂದ ಸ್ವಚ್ಛಗೊಳಿಸಿ ವರೆಸಿ ದೇವರ ಕೋಣೆಯಲ್ಲಿ ದೇವರ ಮುಂದೆ ಇಡಬೇಕು.

ನಂತರ ದೀಪಾರಾಧನೆಯನ್ನು ಮಾಡಿದ ನಂತರ ಈ ಒಂದು ಎಲೆಯನ್ನು ತೆಗೆದುಕೊಂಡು ದಾಳಿಂಬೆಯ ಕಡ್ಡಿಯಿಂದ ಕುಂಕುಮವನ್ನು ನೀರಿನಲ್ಲಿ ಕಲಸಿದ ತಿಲಕ ದಿಂದ ಸ್ವಸ್ತಿಕ್ ಚಿಹ್ನೆಯನ್ನು ಬರೆಯಬೇಕು, ನಂತರ ಎಲೆಯ ಮೇಲೆ ಸ್ವಲ್ಪ ಸಬ್ಬಕ್ಕಿಯನ್ನು ಇಟ್ಟು ದುರ್ಗಾದೇವಿಯ ಫೋಟೋದ ಮುಂದೆ ಇಡಬೇಕು, ಹೀಗೆ ಇಟ್ಟಿದ ನಂತರ ನೀವು ಮಂಗಳಾರತಿಯನ್ನು ಮಾಡಿ ನಿಮಗೆ ಇರುವ ಕಷ್ಟಗಳು ಕಳೆಯಬೇಕು ಹಣಕಾಸಿನ ಸಮಸ್ಯೆಗಳು ದೂರವಾಗಬೇಕು ಕಷ್ಟಪಟ್ಟು ದುಡಿದ ಹಣ ಸ್ವಲ್ಪವಾದರೂ ಕೈಯಲ್ಲಿರುವ ಹಾಗೆ ಅನುಗ್ರಹಿಸು ಎಂದು ಭಕ್ತಿಯಿಂದ ಬೇಡಿಕೊಳ್ಳಬೇಕೂ. ಇನ್ನು ನೈವೇದ್ಯವನ್ನು ಮನೆಯವರು ಮಾತ್ರ ಸ್ವೀಕರಿಸಬೇಕು, ಆ ಒಂದು ಆಲದ ಎಲೆಯನ್ನು ಅಲ್ಲಿಯೇ ಇಟ್ಟು ಪೂಜೆಯನ್ನು ಮಾಡಬೇಕು

ಈ ರೀತಿಯಾಗಿ ಮಾಡುವುದರಿಂದ ಎಲ್ಲ ರೀತಿಯ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ, ವಿಶೇಷವಾಗಿ ಧನಾಕರ್ಷಣೆ ಎನ್ನುವುದು ಆಗುತ್ತದೆ, ನೀವು ಕಷ್ಟಪಟ್ಟು ದುಡಿದ ಹಣ ಸ್ವಲ್ಪವಾದರೂ ನಿಮ್ಮ ಕೈಯಲ್ಲಿ ಉಳಿತಾಯವಾಗುತ್ತದೆ. 

Leave a Comment