ಸರ್ಕಾರಿ ಕೆಲಸ ಸಿಗಲು ಯಾವ ಪೂಜೆ ಮಾಡಬೇಕು? ಬರೀ ಪೂಜೆಯಿಂದಲೇ ಇದು ಸಾಧ್ಯವೇ?

ಸರ್ಕಾರಿ ಉದ್ಯೋಗ ಬೇಕೆಂದರೆ ಅಂತಹವರಿಗೆ ಅದೃಷ್ಟ ಕೂಡಿ ಬರಬೇಕು ಎಂದು ಸುಮಾರು ಜನ ಹೇಳುತ್ತಾ ಇರುತ್ತಾರೆ. ಇನ್ನೂ ಬಹುತೇಕ ಜನರು ನಮಗೆ ಸರ್ಕಾರಿ ಉದ್ಯೋಗ ದೊರೆಯುತ್ತದೆಯೇ ಎಂದು ಜ್ಯೋತಿಷ್ಯಿಗಳ ಬಳಿಗೆ ಹೋಗಿ ಕೇಳುತ್ತಾರೆ. ಬಹುತೇಕ ಯುವಕ ಮತ್ತು ಯುವತಿಯರ ಮಹತ್ವಾಕಾಂಕ್ಷೆ ಸರ್ಕಾರಿ ಉದ್ಯೋಗವನ್ನು ಗಿಟ್ಟಿಸಿಕೊಳ್ಳುವುದಾಗಿರುತ್ತದೆ. ಸಾಮಾನ್ಯವಾಗಿ ಕಷ್ಟ ಪಟ್ಟರೆ ಉದ್ಯೋಗ ದೊರೆಯುತ್ತದೆ. ಆದರೆ ಸರ್ಕಾರಿ ಉದ್ಯೋಗ ದೊರೆಯಬೇಕು ಎಂದರೆ, ಎಲ್ಲಾ ಗ್ರಹಗಳು ಸರಿಯಾದ ಜಾಗತದಲ್ಲಿ ನೆಲೆಗೊಂಡಿರಬೇಕು ಎಂದು ಹೇಳಲಾಗುತ್ತದೆ. ಏಕೆಂದರೆ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳುವ ವಿಚಾರದಲ್ಲಿ ಎಲ್ಲಾ ಗ್ರಹಗಳು ತಮ್ಮದೇ ಆದ ಪ್ರಭಾವವನ್ನು ಬೀರುತ್ತವೆ.

ಪ್ರತಿಯೊಂದು ಗ್ರಹವು ಒಂದಲ್ಲ ಒಂದು ರೀತಿ ವ್ಯಕ್ತಿಯ ಉದ್ಯೋಗದ ಮೇಲೆ ಪ್ರಭಾವವನ್ನು ಬೀರುತ್ತವೆ. ಉದಾಹರಣೆಗೆ ಗುರು ಗ್ರಹವು ಬುದ್ಧಿ ಮತ್ತು ಜ್ಞಾನವನ್ನು ಆಳುವ ಗ್ರಹ. ಯಾರು ಆರ್ಥಿಕ ಕ್ಷೇತ್ರದಲ್ಲಿ ಸಲಹೆಗಾರರು, ಬ್ಯಾಂಕರ್‌ಗಳು ಅಥವಾ ವಕೀಲರು ಆಗಬೇಕೆಂದು ಬಯಸುತ್ತಾರೋ, ಅವರು ಈ ಗ್ರಹದ ಕೃಪೆಗೆ ಪಾತ್ರರಾಗಬೇಕಾಗುತ್ತದೆ. ಇನ್ನು ಮೊದಲೇ ಹೇಳಿದಂತೆ ಸರ್ಕಾರಿ ವಲಯದಲ್ಲಿ ನಿಮಗೆ ಉದ್ಯೋಗ ದೊರೆಯಬೇಕೆಂದರೆ, ನಿಮಗೆ ಹಲವಾರು ಗ್ರಹಗಳ ಕೃಪೆ ಬೇಕಾಗುತ್ತದೆ.

ಸೂರ್ಯ ಮತ್ತು ಚಂದ್ರ ಈ ಎರಡೂ ಗ್ರಹಗಳು ನಿಮಗೆ ವಿಶೇಷವಾಗಿ ಸರ್ಕಾರಿ ಉದ್ಯೋಗವನ್ನು ನೀಡುತ್ತವೆ. ಇದಕ್ಕಾಗಿ ನಿಮ್ಮ ಜಾತಕದಲ್ಲಿ ಸೂರ್ಯನ ಸ್ಥಾನವನ್ನು ಮೊದಲು ತಿಳಿದುಕೊಳ್ಳಬೇಕಾಗುತ್ತದೆ. ಯಾರಿಗೆ ಸೂರ್ಯ ಬಲವಾಗಿ ಇರುತ್ತಾನೆಯೋ, ಅಂತಹವರೇ ಹೆಚ್ಚಾಗಿ ಸರ್ಕಾರಿ ಉದ್ಯೋಗವನ್ನು ಗಿಟ್ಟಿಸಿಕೊಂಡಿರುತ್ತಾರೆ. ಆದರೂ ಸೂರ್ಯ ದುರ್ಬಲನಾಗಿರುವ ಜಾತಕದಲ್ಲಿ ಚಂದ್ರ ಬಲವಾಗಿದ್ದರೆ ಸಹ, ಅಂತಹವರಿಗೆ ಸಹ ಸರ್ಕಾರಿ ಉದ್ಯೋಗ ದೊರೆಯುತ್ತದೆ. ಇದರ ಜೊತೆಗೆ ಕೆಲವೊಮ್ಮೆ ಶನಿಯು ಅತ್ಯಂತ ಪ್ರಬಲನಾಗಿದ್ದರೆ ಸಹ ಸರ್ಕಾರಿ ಉದ್ಯೋಗ ದೊರೆಯುವ ಸಾಧ್ಯತೆ ಇರುತ್ತದೆ.

ಸರ್ಕಾರಿ ಉದ್ಯೋಗವನ್ನು ಗಿಟ್ಟಿಸಿಕೊಳ್ಳಲು ಈ ಪರಿಹಾರಗಳನ್ನು ಮಾಡಿ:
ಒಂದು ವೇಳೆ ನಿಮಗೆ ಸರ್ಕಾರಿ ಉದ್ಯೋಗ ಪಡೆಯಬೇಕೆಂಬ ಹಂಬಲ ಇದ್ದರೆ, ಈ ಪರಿಹಾರಗಳನ್ನು ಪ್ರತಿ ನಿತ್ಯ ಮಾಡಿ. ನಿಮ್ಮ ಪ್ರಯತ್ನಗಳು ವೃಥಾ ಆಗುವುದಿಲ್ಲ.

ಆಡಳಿತಾತ್ಮಕ ಕ್ಷೇತ್ರದಲ್ಲಿ ಕೆಲಸ ಬೇಕೇ..?

ನಿಮಗೆ ಸರ್ಕಾರದ ಕಾರ್ಯಾಂಗ ಅಂದರೆ ಆಡಳಿತಾತ್ಮಕ ಕ್ಷೇತ್ರದಲ್ಲಿ ಕೆಲಸ ಬೇಕಾದರೆ ನೀವು ಸೂರ್ಯ ದೇವನ ಮೊರೆ ಹೋಗಬೇಕಾಗುತ್ತದೆ. ಇದಕ್ಕಾಗಿ ಪ್ರತಿದಿನ ಬೆಳಗ್ಗೆ ಎದ್ದ ಕೂಡಲೆ ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯವನ್ನು ನೀಡಿ. ಹೀಗೆ ಅರ್ಘ್ಯ ನೀಡಿದ ನಂತರ ಅದೇ ಸ್ಥಳದಲ್ಲಿ ಸ್ವಲ್ಪ ಹೊತ್ತು ಕುಳಿತುಕೊಳ್ಳಿ ಅಥವಾ ನಿಂತಿರಿ. ಆನಂತರ ಸಂಕಟ ಮೋಚನ ಹನುಮಾನ್ ಅನ್ನು ಸ್ತುತಿಸುವ ಹನುಮಾನ್ ಚಾಲೀಸಾವನ್ನು ಪಠಿಸಿ. ಇದರಿಂದ ನಿಮಗೆ ಬೇಕಾದ ಫಲಗಳು ದೊರೆಯುತ್ತವೆ. ಜೊತೆಗೆ ಮಾಣಿಕ್ಯ ಕಲ್ಲನ್ನು ಧರಿಸುವುದರಿಂದ ಸಹ ನೀವು ಸೂರ್ಯ ದೇವನ ಕೃಪೆಗೆ ಪಾತ್ರರಾಗಬಹುದು. ಇದನ್ನು ಜ್ಯೋತಿಷ್ಯ ಪಾರಂಗತರಿಂದ ಸಲಹೆ ಪಡೆದ ನಂತರ ಧರಿಸುವುದು ಒಳ್ಳೆಯದು.

ಒಂದು ವೇಳೆ ನಿಮಗೆ ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗ ಬೇಕಾದರೆ, ಸ್ವಲ್ಪ ನೀರನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಅರಿಶಿನವನ್ನು ಹಾಕಿ. ಆನಂತರ ಅದನ್ನು ಸೂರ್ಯನಿಗೆ ಅರ್ಘ್ಯವಾಗಿ ನೀಡಿ. 108 ಬಾರಿ ಓಂ ಆದಿತ್ಯಾಯ ನಮಃ ಎಂಬ ಮಂತ್ರವನ್ನು ಪಠಿಸಿ. ಈ ಪರಿಹಾರವನ್ನು ಪ್ರತಿನಿತ್ಯ ಮಾಡುವುದರಿಂದ ಖಂಡಿತವಾಗಿ ನಿಮಗೆ ಬೇಕಾಗಿರುವ ಫಲವನ್ನು ನೀವು ಸಿದ್ಧಿಸಿಕೊಳ್ಳಬಹುದು.

ಒಂದು ವೇಳೆ ನಿಮಗೆ ಬ್ಯಾಂಕ್ ಅಥವಾ ಹಣಕಾಸು ಕ್ಷೇತ್ರದಲ್ಲಿ ಕೆಲಸ ಬೇಕಾದರೆ, ಆಗ ನೀವು ನೀರಿಗೆ ರೋಲಿ ಅಂದರೆ ಪೂಜೆಗೆ ಬಳಸುವ ಸಿಂಧೂರವನ್ನು ಬೆರೆಸಿ, ಪ್ರತಿದಿನ ಸೂರ್ಯನಿಗೆ ಅರ್ಘ್ಯವನ್ನು ನೀಡಬೇಕಾಗುತ್ತದೆ. ಜೊತೆಗೆ ಗಾಯತ್ರಿ ಮಂತ್ರವನ್ನು ಸಹ ಪಠಿಸಿ. ಈ ಮಂತ್ರವನ್ನು 108 ಬಾರಿ ಪಠಿಸುವ ಮೂಲಕ ಸಹ ನೀವು ಸರ್ಕಾರಿ ಉದ್ಯೋಗವನ್ನು ಗಿಟ್ಟಿಸಿಕೊಳ್ಳುವ ಸಾಧ್ಯತೆಯನ್ನು ಹೆಚ್ಚಿಸಿಕೊಳ್ಳಬಹುದು.

ವೈದ್ಯಕೀಯ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಬೇಕೇ..?

ವೈದ್ಯಕೀಯ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗವನ್ನು ಪಡೆಯಬೇಕು ಎಂದುಕೊಳ್ಳುವವರು ತಮ್ಮ ಪರಿಶ್ರಮದ ಜೊತೆಗೆ ಗ್ರಹಗಳ ಕೃಪೆಗೆ ಸಹ ಪಾತ್ರರಾಗಬೇಕಾಗುತ್ತದೆ. ಪ್ರತಿದಿನ ಬೆಳಗ್ಗೆ ನೀವು ಸೂರ್ಯನಿಗೆ ಅರ್ಘ್ಯವನ್ನು ನೀಡುವುದನ್ನು ಮರೆಯಬೇಡಿ. ಶ್ರದ್ಧಾ ಭಕ್ತಿಗಳಿಂದ ಸೂರ್ಯನನ್ನು ಪೂಜಿಸಿದರೆ, ನಿಮಗೆ ಕೆಲಸ ದೊರೆಯುವುದು ಗ್ಯಾರಂಟಿಯಾಗಿರುತ್ತದೆ.

ಇಂತಹದೇ ಕ್ಷೇತ್ರ ಎಂಬ ಭೇದವಿಲ್ಲದೆ, ಸರ್ಕಾರಿ ಉದ್ಯೋಗವೊಂದನ್ನು ಗಳಿಸಿಕೊಳ್ಳಬೇಕು ಎಂಬ ಹಂಬಲ ನಿಮಗೆ ಇದ್ದರೆ, ಅದಕ್ಕೂ ಸಹ ಒಂದು ಪರಿಹಾರ ಇದೆ. ಇದಕ್ಕಾಗಿ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿ. ಆದಿತ್ಯ ಹೃದಯ ಸ್ತೋತ್ರವು ಅತ್ಯಂತ ಪವಿತ್ರವಾದ ಸ್ತೋತ್ರವಾಗಿದ್ದು, ಇದು ಕೆಲಸ, ಸಂತೋಷ, ಕನಸು ನನಸು ಮಾಡುವ ಶಕ್ತಿ ಎಲ್ಲವನ್ನೂ ತನ್ನೊಳಗೆ ಒಳಗೊಂಡಿದೆ. ವಾಲ್ಮೀಕಿ ರಾಮಾಯಣದಲ್ಲಿ ಈ ಆದಿತ್ಯ ಹೃದಯ ಸ್ತೋತ್ರದ ಕುರಿತಾಗಿ ತಿಳಿಸಲಾಗಿದೆ. ಅಗಸ್ತ್ಯ ಮಹಾಮುನಿಗಳು ರಾವಣನ ಮೇಲೆ ವಿಜಯ ಸಾಧಿಸಲು ಈ ಮಂತ್ರವನ್ನು ಶ್ರೀ ರಾಮಚಂದ್ರನಿಗೆ ಉಪದೇಶಿಸಿದರು.

ಮತ್ತೊಂದು ಪರಿಹಾರ ಸಹ ಇದೆ. ಪ್ರತಿ ಭಾನುವಾರ ಆಂಜನೇಯ ಸ್ವಾಮಿಗೆ ಬೆಲ್ಲವನ್ನು ದಾನ ಮಾಡುತ್ತಾ ಬನ್ನಿ. ಇದು ನಿಮಗೆ ಸರ್ಕಾರಿ ಉದ್ಯೋಗ ದೊರಕಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಈ ಸರಳ ಸಲಹೆಗಳನ್ನು ಪಾಲಿಸಿ, ಸರ್ಕಾರಿ ಉದ್ಯೋಗವನ್ನು ನಿಮ್ಮದಾಗಿಸಿಕೊಳ್ಳಿ.

Leave a Comment