ಮತ್ತೆ ಕಿರಿಕ್‌ ಮಾಡಿಕೊಂಡ ಸುನಾಮಿ ಕಿಟ್ಟಿ: ದೂರಿಗೆ ಪ್ರತಿದೂರು ದಾಖಲು

ಬೆಂಗಳೂರು: ಬಿಗ್‌ಬಾಸ್‌ ಖ್ಯಾತಿಯ ಸುನಾಮಿ ಕಿಟ್ಟಿ ಎಲ್ಲರಿಗೂ ಚಿರಪರಿಚಿತ ವ್ಯಕ್ತಿ. ಆದರೆ ಇತ್ತೀಚಿನ ದಿನಗಳಲ್ಲಿ ಕೇಸ್‌ಗಳ ವಿಚಾರದಲ್ಲಿಯೇ ಈತ ಸದ್ದು ಮಾಡುತ್ತಿದ್ದಾನೆ. ಪಬ್‌ನಲ್ಲಿ ಗಲಾಟೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಕಿಟ್ಟಿ ಮತ್ತು ಆತನ ಸ್ನೇಹಿತನ ವಿರುದ್ಧ ಕೇಸ್‌ ದಾಖಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ವರುಣನ ಆರ್ಭಟ : ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಜುಲೈ 24 ರಂದು ರಾತ್ರಿ ಇಲ್ಲಿನ ಮಿರಾಜ್ ಹಬ್ ಎಂಬ ಪಬ್‌ನಲ್ಲಿ ಸುನಾಮಿ ಕಿಟ್ಟಿ ಮತ್ತು ಆತನ ಸ್ನೇಹಿತ ಚೇತನ್ ಗೌಡ ಗಲಾಟೆ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ. 

ಏನಿದು ಘಟನೆ: 
ಚೇತನ್, ಸುನಾಮಿ ಕಿಟ್ಟಿ ಮತ್ತು ಆತನ ಸ್ನೇಹಿತರು ಪಾರ್ಟಿ ಮಾಡಲೆಂದು ಇಲ್ಲಿನ ಮಿರಾಜ್‌ ಹಬ್‌ ಎಂಬ ಪಬ್‌ಗೆ ಹೋಗಿದ್ದಾರೆ. ಅಲ್ಲಿ ಶಾಂಪೇನ್‌ನನ್ನು ತೆಗೆದುಕೊಂಡು ಜೋರಾಗಿ ಇಟ್ಟಿದ್ದಾರೆ. ಅದರಲ್ಲಿದ್ದ ಶಾಂಪೇನ್‌ ಪಕ್ಕದಲ್ಲೇ ಕುಳಿತಿದ್ದ ಪ್ರಶಾಂತ್‌ ಎಂಬವರ ಮೇಲೆ ಬಿದ್ದಿದೆ. ಅದಕ್ಕೆ ಕೋಪಗೊಂಡ ಪ್ರಶಾಂತ್‌, “ಪಾರ್ಟಿ ಮಾಡೋದು ನೀವು. ಮಾಡಿಕೊಳ್ಳಿ. ನಮ್ಮ ಮೇಲೆ ಏನಕ್ಕೆ ಹಾಕುತ್ತಿದ್ದೀರಾ?” ಎಂದು ಹೇಳಿದ್ದಾರೆ. ಇದಕ್ಕೆ ಕಿಟ್ಟಿ ಗ್ಯಾಂಗ್‌ ಪ್ರಶಾಂತ್‌ ಮತ್ತು ಅವರ ಸ್ನೇಹಿತರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. 

ಸುನಾಮಿ ಕಿಟ್ಟಿಯ ಕಿರಿಕ್ ಇದೇ ಮೊದಲಲ್ಲ. ಈ ರೀತಿಯಾಗಿ ಸಾಕಷ್ಟು ಬಾರಿ ಗಲಾಟೆ ಮಾಡಿಕೊಂಡಿದ್ದಾರೆ. ಸದ್ಯ ಎ1 ಆರೋಪಿಯಾಗಿ ಚೇತನ್ ಗೌಡ, ಎ2 ಆರೋಪಿಯಾಗಿ ಸುನಾಮಿ ಕಿಟ್ಟಿ ವಿರುದ್ಧ ಕೇಸ್‌ ದಾಖಲಾಗಿದೆ. 

ಇದನ್ನೂ ಓದಿ: ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ವರುಣನ ಆರ್ಭಟ : ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಪ್ರತಿದೂರು ದಾಖಲು: 
ಇನ್ನು ಚೇತನ್‌ ಸಹ ದೂರು ನೀಡಿದ್ದು, “ಶ್ಯಾಂಪೇನ್ ಅವರ ಮೇಲೆ ಬಿದ್ದಿದ್ದಕ್ಕೆ ನಮ್ಮನ್ನು ಪ್ರಶ್ನಿಸಿ ಬಾಟಲಿಯಿಂದ ಹಲ್ಲೆ ಮಾಡಿದ್ದಾರೆ” ಎಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ



Source link

Leave a Comment