ಲಕ್ಷ್ಮೀ ಯನ್ನು ಒಲಿಸಿಕೊಳ್ಳಲು ಇಲ್ಲಿದೆ ಸರಳ ಉಪಾಯ, ಜೀವನ ಪೂರ್ತಿ ಇರುತ್ತದೆ ಲಕ್ಷ್ಮೀ ಕಟಾಕ್ಷ

ಬೆಂಗಳೂರು : ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀ ದೇವಿಯ ಆಶೀರ್ವಾದವನ್ನು ಪಡೆಯಲು ಜನರು  ನಾನಾ ಪ್ರಯತ್ನಗಳನ್ನು ಮಾಡುತ್ತಾರೆ. ಕೆಲವರು ಅದೆಷ್ಟೇ ಕಷ್ಟಪಟ್ಟು ದುಡಿದರೂ ಯಶಸ್ಸು ಸಿಗುವುದೇ ಇಲ್ಲ. ಸಂಪಾದಿಸಿದ ಹಣ ಕೈಯ್ಯಲ್ಲಿ ಉಳಿಯುವುದೇ ಇಲ್ಲ. ಪಟ್ಟ ಶ್ರಮಕ್ಕೆ ಪ್ರತಿಫಲ ಸಿಗುವುದೇ ಇಲ್ಲ. ಹೀಗಾದಾಗ ಮನಸ್ಸು ತಲ್ಲಣಿಸಿ ಬಿಡುತ್ತದೆ.  ಏನು ಮಾಡಬೇಕು ಎನ್ನುವ ಲೆಕ್ಕಾಚಾರಕ್ಕೆ ಇಳಿಯುತ್ತದೆ ಮನಸ್ಸು. ಆದರೆ ಜ್ಯೋತಿಷ್ಯದಲ್ಲಿ ಈ ಸಮಸ್ಯೆಗಳಿಗೆ ಪರಿಹಾರವನ್ನು ಹೇಳಲಾಗಿದೆ. ಲಕ್ಷ್ಮೀ ದೇವಿಯನ್ನು ಮೆಚ್ಚಿಸಲು ಕೆಲವು ಸುಲಭ ಪರಿಹಾರಗಳನ್ನು ಸೂಚಿಸಲಾಗಿದೆ. 

ಲಕ್ಷ್ಮೀ ಯನ್ನು ಮೆಚ್ಚಿಸಲು ಇರುವ ಪರಿಹಾರ ಮಾರ್ಗಗಳು : 
ಮನೆಯಲ್ಲಿ ಶ್ರೀ ಯಂತ್ರ ಅಥವಾ ಮಹಾಲಕ್ಷ್ಮಿ ಯಂತ್ರವನ್ನು ಸ್ಥಾಪಿಸಿ ಪ್ರತಿದಿನ ಪೂಜಿಸುವುದರಿಂದ  ಲಕ್ಷ್ಮೀ ದೇವಿಯು ಶೀಘ್ರದಲ್ಲೇ ಪ್ರಸನ್ನಳಾಗುತ್ತಾಳೆ. ಇದು ಸಾಧ್ಯವಾಗದಿದ್ದರೆ, ಪ್ರತಿ ಶುಕ್ರವಾರ ಬೆಳಿಗ್ಗೆ, ಬಿಳಿ ಬಟ್ಟೆಗಳನ್ನು ಧರಿಸಿ, ಶ್ರೀ ಸ್ತೋತ್ರ  ಪಠಿಸಿ. ಅಲ್ಲದೆ ಲಕ್ಷ್ಮೀಗೆ ಕಮಲದ ಹೂವನ್ನು ಅರ್ಪಿಸಿ.

ಇದನ್ನೂ ಓದಿ : ಈ ದಿನದಂದು ಬದಲಾಗಲಿದೆ ನಾಲ್ಕು ರಾಶಿಯವರ ಅದೃಷ್ಟ : ಸೂರ್ಯ ಶುಕ್ರರು ಬೆಳಗಲಿದ್ದಾರೆ ಭವಿಷ್ಯ

ಶುಕ್ರವಾರದಂದು  ಲಕ್ಷ್ಮೀ ದೇವಿಗೆ ಕಮಲದ ಹೂವು, ಖೀರ್ ಅಥವಾ ಹಾಲಿನಿಂದ ಮಾಡಿದ ಸಿಹಿತಿಂಡಿಗಳನ್ನು ಅರ್ಪಿಸಿ. ಗುಲಾಬಿ ಸುಗಂಧವನ್ನು ಕೂಡಾ ಅರ್ಪಿಸಿ.  ಹೀಗೆ ಮಾಡುವುದರಿಂದ ಲಕ್ಷ್ಮೀ ಪ್ರಸನ್ನಳಾಗುತ್ತಾಳೆ.  

ಶುಭ ಕಾರ್ಯಗಳಿಗೆ ತೆರಳುವ ಮುನ್ನ ಮೊಸರು ಮತ್ತು ಸಕ್ಕರೆಯನ್ನು ಸೇವಿಸುವುದನ್ನು ಮರೆಯಬೇಡಿ. ಹೀಗೆ ಮಾಡಿದರೆ ನಾವು ಹೊರಡುವ ಕೆಲಸದಲ್ಲಿ ಲಕ್ಷ್ಮೀ ಯಶಸ್ಸು ತಂದು ಕೊಡುತ್ತಾಳೆ . 

ಪ್ರತಿ ಶನಿವಾರ ಸಂಜೆ  ಅಶ್ವತ ಮರದ ಕೆಳಗೆ  ಎಳ್ಳೆಣ್ಣೆ ದೀಪವನ್ನು ಬೆಳಗಿಸಿ.  ಲಕ್ಷ್ಮೀ ಮತ್ತು ಶನಿದೇವರ ಅನುಗ್ರಹದಿಂದ,  ಹಣಕಾಸಿನ ಸಮಸ್ಯೆ ದೂರವಾಗುತ್ತದೆ. ಏನೇ ಕಷ್ಟಗಳಿದ್ದರೂ ಪರಿಹಾರವಾಗುತ್ತದೆ. 

ಇದನ್ನೂ ಓದಿ : Planet Retrograde 2022: ಮುಂದಿನ 108 ದಿನಗಳ ಕಾಲ ಈ ರಾಶಿಗಳ ಜನರಿಗೆ ಭಾರಿ ಧನಾಗಮನ

 

( ಸೂಚನೆ :  ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು  ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.



Source link

Leave a Comment