ಧ್ರುವ ತಾರೆ ಚಿತ್ರದ ನಟಿ ಹಳ್ಳಿಯಲ್ಲಿ ಮಾಡುತ್ತಿರುವ ಕೆಲಸ ಏನು ಗೊತ್ತಾ !

ಐಷಾರಾಮಿ ಜೀವನಕ್ಕೆ ಒಂದು ಸಾರಿ ಒಗಿದ್ದರೆ ಮತ್ತೆ ಸಾಮಾನ್ಯರಂತೆ ಬದುಕುವುದು ತುಂಬಾ ಕಷ್ಟ ಆದರೆ ಖ್ಯಾತ ನಟಿ ಮಾತ್ರ ಎಡಬಿಡದೆ ಅವಕಾಶಗಳು ಬರುತ್ತಿದ್ದರೂ ಸ್ಟಾರ್ ಜೀವನ ಸಾಕೆಂದು ಅದಕ್ಕೆ ಗುಡ್ ಬೈ ಹೇಳಿ ಹಳ್ಳಿ ಸೇರಿಕೊಂಡಿದ್ದಾರೆ.ಅಷ್ಟಕ್ಕೂ ಈ ನಟಿ ಯಾರು ? ಹಳ್ಳಿಯಲ್ಲಿ ಇವರು ಮಾಡುತ್ತಿರುವ ಕೆಲಸ ಏನು ಎಂದು ತಿಳಿಯೋಣ ಬನ್ನಿ..

ನಾನಿರುವುದೇ ನಿನಗಾಗಿ , ಧ್ರುವತಾರೆ ಸೇರಿ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿದ ಪ್ರತಿಭಾನ್ವಿತ ಹಾಗೂ ಸುಂದರ ನಟಿ ದೀಪಾ ಅವರು.ಸೌಂದರ್ಯದ ವಿಷಯದಲ್ಲಿ ಈ ನಟಿಗೆ ಈ ನಟಿಯೇ ಸಾಟಿ.ರೊಮ್ಯಾಂಟಿಕ್ ಚಿತ್ರಗಳಲ್ಲಿ ಹೆಚ್ಚು ನಟಿಸುತ್ತಿದ್ದ ದೀಪಾ ಅವರು ಈಗ ಎಲ್ಲಿದ್ದಾರೆ ಗೊತ್ತಾ..ಕೇರಳ ರಾಜ್ಯದಲ್ಲಿ ಹುಟ್ಟಿದ ಈ ನಟಿ ಅಲ್ಲಿ ಉನ್ನಿ ಮೇರಿ ಹೆಸರಿನಲ್ಲಿ ಗುರುತಿಸಿಕೊಂಡರೂ , ನೂರಾರು ಚಿತ್ರಗಳಲ್ಲಿ ನಟಿಸಿದ ನಟಿ ದೀಪಾ .

1982 ರಲ್ಲಿ ಕಾಲೇಜು ಉಪನ್ಯಾಸಕರಾದ ರೆಜಾಯ್ ರನ್ನು ಮದುವೆಯಾದರೂ.1992 ರಲ್ಲಿ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ಈ ನಟಿ ಮತ್ತೆಂದೂ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ಹೇಳಿ ಹೊಸ ಜೀವನದ ಹಾದಿ ಹಿಡಿದರು.ಜೀವನದಲ್ಲಿ ಬೇರೆಯವರಿಗೆ ಉಪಯೋಗ ಆಗುವ ಏನಾದರೂ ಒಂದಷ್ಟು ಕೆಲಸಗಳನ್ನು ಮಾಡೋಣ ಎಂದು ಭಾವಿಸಿದ ನಟಿ ದೀಪಾ ಹಳ್ಳಿ ಹಾಗೂ ಬುಡಕಟ್ಟು ಜನರ ಜೊತೆ ಬೆರೆತು ಹೋಗಿದ್ದು ,ಅವರ ಕಷ್ಟಗಳನ್ನು ಆಲಿಸುತ್ತಾ ಅವರಿಗೆ ಮೆಡಿಕಲ್ ಕ್ಯಾಂಪ್ ಗಳನ್ನು ಏರ್ಪಡಿಸುತ್ತಾ , ಶಾಲೆಯಿಂದ ದೂರ ಉಳಿದಿರುವ ಮಕ್ಕಳನ್ನು ಶಾಲೆಗೆ ಕರೆತರುವ ಕೆಲಸದಲ್ಲಿ ತೊಡಗಿದ್ದಾರೆ.

ಈಗ ಹಳ್ಳಿಯಲ್ಲಿ ನೆಲೆಸಿರುವ ನಟಿ ದೀಪಾ ಸುತ್ತಮುತ್ತಲಿನ ಹಿಂದುಳಿದ ಹಳ್ಳಿಗಳ ಅಭ್ಯುದಯಕ್ಕಾಗಿ ಕೆಲಸ ಮಾಡುತ್ತಿದ್ದಾರೆ.ಸೆಲೆಬ್ರಿಟಿ ಜೀವನವನ್ನು ತ್ಯಜಿಸಿರುವ ಈ ನಟಿ ಸಾಮಾನ್ಯ ಮಹಿಳೆಯಂತೆ ಎಲ್ಲರ ಜೊತೆ ಬೆರೆತು ಬಿಸಿಲಿನಲ್ಲಿ ನಡೆಯುತ್ತಾ ಅಕ್ಷರಶಃ ಸಮಾಜ ಸೇವಕಿಯಾಗಿ ಮಾರ್ಪಟ್ಟಿದ್ದಾರೆ.ಇತ್ತೀಚೆಗೆ ಮೀಡಿಯಾದವರು ಮತ್ತೆ ಸಿನಿಮಾದಲ್ಲಿ ನಟಿಸ್ತೀರಾ ಎಂದು ದೀಪಾ ಅವರನ್ನು ಕೇಳಿದಾಗ ಅವರು ಕೊಟ್ಟ ಉತ್ತರ ನಾನು ಸಿನಿಮಾ ನೋಡಿ ವರ್ಷಗಳೇ ಕಳೆದಿವೆ ಸಿನಿಮಾ ಬಗ್ಗೆ ನನಗೆ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ.

ಒಂದಂತೂ ನಿಜ ಬೇರೆಯವರಿಗೆ ಸಹಾಯ ಮಾಡಿದಾಗ ಅದರಿಂದ ಸಿಗುವ ಸಂತೋಷವೇ ಬೇರೆ , ಬುಡುಕಟ್ಟು ಜನರ ಆರೋಗ್ಯ ಮತ್ತು ಶಿಕ್ಷಣ ಸುಧಾರಣೆಗೆ ಪಣ ತೊಟ್ಟಿರುವ ನಟಿ ದೀಪಾ ಅವರು ಒಳ್ಳೆಯ ಗುಣದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸಲ್ಲಿ ತಿಳಿಸಿ.ಧನ್ಯವಾದಗಳು.

Leave a Comment