ಎಲ್ಲಿ ಸಿಕ್ಕಿದ್ರು ಬಿಡಲೇ ಬೇಡಿ ಈ ಬೇರು ಅರೋಗ್ಯ ಸಂಜೀವಿನಿ ಇದು ಹೀಗೆ ಬಳಸಿ!

ಈ ಬೇರು ಬೇರೆ ಬೇರೆ ಅರೋಗ್ಯ ಸಮಸ್ಸೆಗಳನ್ನು ದೂರ ಮಾಡಲು ಸಹಾಯ ಮಾಡುತ್ತವೆ. ನಿಮ್ಮಲ್ಲಿ ಯಾರಿಗಾದರೂ ಉಷ್ಣದಿಂದ ಸಾಕಷ್ಟು ಕಷ್ಟವಾಗುತ್ತಿದ್ದರೆ ಅಂದರೆ ಕೆಲವರಿಗೆ ಉಷ್ಣದಿಂದ ಮೂತ್ರ ವಿಸರ್ಜನೆಯಲ್ಲಿ ಉರಿಯುತ್ತದೆ. ಹಾಗೇ ಕಣ್ಣುಗಳು ಉರಿಯುತ್ತವೆ. ಮತ್ತು ಉಸಿರಾಟ ಮಾಡುವಾಗ ಮೂಗಿನಿಂದ ಬಿಸಿ ಗಾಳಿ ಬರುವುದು ಅಥವಾ ಒಳಗಡೆ ಉರಿಯೂತ ಉಂಟಾಗುತ್ತದೆ. ಇದರಿಂದ ಮೂಗಿನಲ್ಲಿ ರಕ್ತ ಸ್ರಾವ ಸಹ ಬರುತ್ತದೆ. ಇಂಥಹ ಸಮಸ್ಯೆಗಳನ್ನು ಎದುರಿಸಿರುವವರು ಸಾಕಷ್ಟು ಜನರು ಇದ್ದಾರೆ.

ಸಾಕಷ್ಟು ರೀತಿಯ ಪ್ರಯತ್ನಗಳನ್ನು ಮಾಡಿದರೆ ಒಂದೆರಡು ದಿನ ಅಥವಾ ಒಂದು ವಾರಗಳ ಕಾಲ ಪರಿಹಾರ ಆಗುತ್ತದೆ. ಆದರೆ ಇದು ದೀರ್ಘ ಕಾಲದವರೆಗೂ ಉಪಶಮನ ನೀಡುವುದಿಲ್ಲ. ಆದರೆ ಇಂದಿನ ಲೇಖನದಲ್ಲಿ ಈ ಲಾವಂಚವನ್ನು ಬಳಸಿಕೊಂಡು ಯಾವ ರೀತಿಯಲ್ಲಿ ಈ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯಬಹುದು ಎಂದು ತಿಳಿಸಿಕೊಡುತ್ತೇವೆ. ಲಾವಂಚವನ್ನು ತೆಗೆದುಕೊಳ್ಳಿ. ಅದನ್ನು ನೀರಿನಲ್ಲಿ ನೆನೆಸಿ. ನಂತರ ಮರುದಿನ ಬೆಳಗ್ಗೆ ಲಾವಂಚವನ್ನು ತೆಗೆದು ಆ ನೀರನ್ನು ಮಾತ್ರ ಕುಡಿಯಿರಿ. ಇದನ್ನು ಊಟವಾದ ನಂತರ ಒಂದು ಗಂಟೆ ನಂತರ ಈ ನೀರನ್ನು ಕುಡಿಯಿರಿ. ಇದರಿಂದ ದೇಹವು ತಂಪಾಗುತ್ತದೆ.

ನಿಮಗೆ ರಾತ್ರಿ ನೆನೆಸಿಡಲು ನೆನಪಿಟ್ಟುಕೊಳ್ಳಲು ಆಗುವುದಿಲ್ಲ ಎನ್ನುವವರು ಸಹ 6 ರಿಂದ 7 ಗಂಟೆವರೆಗೆ ಈ ಲಾವಂಚ ನೆನೆಸಿಡಿ. ಇದರಿಂದ ಇದು ಜೊತೆಗೆ ರಸವನ್ನು ಬಿಡುತ್ತದೆ. ನಿಮಗೆ ಸಮಯವಿದ್ದಾಗ ಇದನ್ನು 6 ರಿಂದ 7 ಗಂಟೆ ನೆನೆಸಿಡಿ. ನಂತರ ಇದರ ರಸವನ್ನು ಬಳಕೆ ಮಾಡಿ. ನೆನಪಿಡಿ ಇದನ್ನು ಊಟವಾದ ನಂತರವೇ ಒಂದು ಗಂಟೆ ಬಳಿಕ ಸೇವಿಸಬೇಕು. ಲಾವಂಚವನ್ನು ನೆನೆಸಿ, ಅದು ಬಿಟ್ಟ ರಸವನ್ನು ಸೇವಿಸಿದರೆ ನಿಮಗೆ ಮೂಗು ಉರಿತ, ಕಣ್ಣು ಉರಿತ ದೇಹದಲ್ಲಿ ಉಷ್ಣ ಜಾಸ್ತಿಯಾಗುವುದು ಇವೆಲ್ಲವೂ ಕ್ರಮೇಣ ಕಡಿಮೆಯಾಗುತ್ತದೆ.

ಈ ಲಾವಂಚ ಎಲ್ಲಿ ಸಿಗುತ್ತದೆ ಎಂದು ನಿಮ್ಮ ಪ್ರಶ್ನೆಯಾದರೆ ಈ ಲಾವಂಚ ಆಯುರ್ವೇದ ಅಂಗಡಿಗಳಲ್ಲಿ, ಗ್ರಂಥಿ ಅಂಗಡಿಗಳಲ್ಲಿ ಸಿಗುತ್ತದೆ. ಈ ಲಾವಂಚದ ನೀರು ಕುಡಿಯುವುದರಿಂದ ದೇಹವೂ ತಂಪಾಗಿರುತ್ತದೆ. ಹಾಗೆಯೇ ಹೊಟ್ಟೆ ಉರಿ ಸಹ ಕಡಿಮೆಯಾಗುತ್ತದೆ. ರಕ್ತ ಪಿತ್ತ ಏನಾದರೂ ನಿಮ್ಮಲ್ಲಿ ಕಾಣಿಸಿಕೊಂಡರೆ ಆ ಸಂದರ್ಭದಲ್ಲಿ ಈ ಲಾವಂಚವನ್ನು ಪುಡಿಮಾಡಿಕೊಳ್ಳಿ, ಅದಕ್ಕೆ ಜೇನುತುಪ್ಪವನ್ನು ಬೆರೆಸಿ ಸೇವನೆ ಮಾಡುವುದರಿಂದ ರಕ್ತದ ಪಿತ್ತ ಕಡಿಮೆಯಾಗುತ್ತದೆ. ಕೊಬ್ಬರಿ ಎಣ್ಣೆಯ ಜೊತೆಗೆ ಈ ಲಾವಂಚವನ್ನು ಕುದಿಸಿ, ಈ ಲಾವಂಚದ ರಸ ಕೊಬ್ಬರಿ ಎಣ್ಣೆಯೊಂದಿಗೆ ಬೆರೆಯುವವರೆಗೆ 10 ನಿಮಿಷಗಳ ಕಾಲ ಕುದಿಸಿ. ನಂತರ ಅದನ್ನು ಆರಿಸಿ ಬಾಟಲ್ ನಲ್ಲಿ ತುಂಬಿಕೊಳ್ಳಿ.

ಇದನ್ನು ನೀವು ದೇಹಕ್ಕೆ ಹಚ್ಚಿ ಮಸಾಜ್ ಮಾಡಿಕೊಳ್ಳುವುದರಿಂದ ದೇಹವೂ ತಂಪಾಗಿರುತ್ತದೆ. ದೇಹದಲ್ಲಿ ಕಂಪನ ಉಂಟಾಗುತ್ತದೆ. ಈ ಕೊಬ್ಬರಿ ಎಣ್ಣೆಯನ್ನು ಸೇರಿಸಿ ಮಾಡಿದ ಈ ಲಾವಂಚವನ್ನು ಬಳಸುವುದರಿಂದ ಕಣ್ಣಿನ ಉರಿತ, ತಲೆ ಉರಿತ ಎಲ್ಲವೂ ಕಡಿಮೆ ಆಗುತ್ತದೆ. ಇನ್ನೂ ಮೂಗಿನಿಂದ ರಕ್ತ ಬರುತ್ತಿದ್ದರೆ ಇದರ ಎಣ್ಣೆಯನ್ನು ತಲೆಗೆ ಹಾಕಿಕೊಳ್ಳಿ. ಇದರಿಂದ ರಕ್ತಸ್ರಾವ ನಿಲ್ಲುತ್ತದೆ. ಮತ್ತು ಲಾವಂಚದ ಬೇರನ್ನು ನೀರಿನಲ್ಲಿ ಹಾಕಿ ಕುದಿಸಿ. ಅದರ ಸಾರ ಬಿಟ್ಟ ನಂತರ ನಿಮ್ಮ ಸ್ನಾನ ಮಾಡುವ ನೀರಿನಲ್ಲಿ ಬೆರೆಸಿ ಸ್ನಾನ ಮಾಡಿ. ಇದ್ರಿಂದ ದೇಹವೂ ತಂಪಾಗಿರುತ್ತದೆ. ಹಾಗೂ ಸುವಾಸನೆ ಭರಿತದಿಂದ ಕೂಡಿರುತ್ತದೆ. ನೀವು ತುಂಬಾ ಫ್ರೆಶ್ ಆಗಿ ಇರುತ್ತೀರಿ.

Leave a Comment