ನೀನು ಜೀವನದಲ್ಲಿ ಗೆಲ್ಲಬೇಕಾದರೆ ಈ 5 ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡ!

ಆಚಾರ್ಯ ಚಾಣಕ್ಯ ಅವರು ತಮ್ಮ ಚಾಣಕ್ಯ ನೀತಿಯಲ್ಲಿ ಜೀವನದ ವಿವಿಧ ಆಯಾಮಗಳ ಬಗ್ಗೆ ಬರೆದಿದ್ದಾರೆ. ಅವರು ತಮ್ಮ ಚಾಣಕ್ಯ ನೀತಿಯಲ್ಲಿ, ಹಣ, ಆರೋಗ್ಯ, ಪ್ರಗತಿ, ಸಮೃದ್ಧಿ ಮತ್ತು ಸ್ನೇಹಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಹೇಳಿದ್ದಾರೆ. ಆಚಾರ್ಯ ಚಾಣಕ್ಯನು ತನ್ನ ಚಾಣಕ್ಯ ನೀತಿಯಲ್ಲಿ ಹೇಳಿರುವ ಪ್ರಕಾರ, ನೀವು ಎಷ್ಟೇ ದುಃಖಿತರಾಗಿದ್ದರೂ, ಈ ವಿಷಯಗಳನ್ನು ಯಾರಿಗೂ ಹೇಳಬಾರದು ಎಂದು ಉಲ್ಲೇಖಿಸಿದ್ದಾನೆ. ಚಾಣಕ್ಯನ ಪ್ರಕಾರ, ನಾವು ಯಾವೆಲ್ಲಾ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಗೊತ್ತಾ..?

ಯಾವ ವಿಷಯಗಳನ್ನು ಎಂದಿಗೂ ಹೇಳಬಾರದು:
ಬೇರೆಯವರಿಗೆ ಹೇಳಬಾರದು ಎಂದು ಕೆಲವು ವಿಷಯಗಳನ್ನು ಚಾಣಕ್ಯ ತನ್ನ ನೀತಿಯಲ್ಲಿ ಹೇಳಿದ್ದಾನೆ. ನಮ್ಮ ಜೀವನಕ್ಕೆ ಅತ್ಯವಶ್ಯಕವಾಗಿರುವ ಅನೇಕ ತತ್ವಗಳನ್ನು ಹೇಳಿರುವ ಚಾಣಕ್ಯನು, ಯಾರಿಗೂ ಹೇಳಬಾರದ 5 ವಿಷಯಗಳನ್ನು ಹೇಳಿದ್ದಾನೆ. ಚಾಣಕ್ಯನ ಪ್ರಕಾರ, ಆ 5 ವಿಷಯಗಳಾವುವು..?

ಹಣದ ನಷ್ಟ:ನಮ್ಮ ಜೀವನದಲ್ಲಿ ನಾವು ಹಣದ ನಷ್ವವನ್ನು ಅನುಭವಿಸುತ್ತಿದ್ದರೆ ಅಥವಾ ನಮ್ಮ ವ್ಯವಹಾರ, ವ್ಯಾಪಾರದಲ್ಲಿ ನಷ್ಟವಾದರೆ ಅದನ್ನು ಯಾರ ಬಳಿಯೂ ಕೂಡ ಹೇಳಲಾಲು ಹೋಗಬಾರದು. ಇತ್ತೀಚಿನ ದಿನಗಳಲ್ಲಿ ನಮ್ಮ ನಷ್ಟವನ್ನು ನೋಡಿ, ನಮ್ಮ ಕಷ್ಟದ ದಿನವನ್ನು ನೋಡಿ ನಗುವವರೆ ಹೆಚ್ಚು ಹೊರತು, ನಮ್ಮ ಕಷ್ಟಕ್ಕೆ ಬರುವವರು ತುಂಬಾ ಕಡಿಮೆ. ಹಣದ ನಷ್ಟಕ್ಕೆ ಯಾರು ನಮಗೆ ಸಹಾಯ ಮಾಡುತ್ತಾರೋ ಅಂತಹ ವ್ಯಕ್ತಿಗಳ ಬಳಿ ಮಾತ್ರ ನಾವು ನಮ್ಮ ಹಣದ ನಷ್ಟವನ್ನು ಹೇಳಿಕೊಳ್ಳಬೇಕು ಎಂದು ಚಾಣಕ್ಯ ಉಲ್ಲೇಖಿಸಿದ್ದಾನೆ

ಹೆಂಡತಿಯ ದುರ್ವರ್ತನೆ:ಪತಿಯು ತನ್ನ ಪತ್ನಿಯ ದುರ್ವರ್ತನೆಯ ಕುರಿತು ಯಾರ ಬಳಿಯು ಮಾತನಾಡಬಾರದು. ಎಂದಿಗೂ ಕೂಡ ಓರ್ವ ವ್ಯಕ್ತಿ ತಮ್ಮ ದಾಂಪತ್ಯಕ್ಕೆ ಸಂಬಂಧಿಸಿದ ವಿಚಾರವನ್ನು ಯಾರ ಬಳಿಯು ಚರ್ಚಿಸಬಹುದು. ಇದರಿಂದ ಅವಮಾನವಾಗುವುದು ನಿಮಗೆ ಮತ್ತು ನಿಮ್ಮ ಪತ್ನಿಗೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಹೆಂಡತಿಯ ದುರ್ವರ್ತನೆಯನ್ನು ಆದಷ್ಟು ಪತಿಯೇ ಸರಿ ಮಾಡಲು ಪ್ರಯತ್ನಿಸಬೇಕು. ಒಂದು ವೇಳೆ ಇದು ಮಿತಿ ಮೀರಿದರೆ ಪೋಷಕರ ಬಳಿ ಸಮಸ್ಯೆಗಳನ್ನು ಹಂಚಿಕೊಳ್ಳಬೇಕು.

ಮನಸ್ಸಿನ ದುಃಖ:ಇತರರೊಂದಿಗೆ ತಮ್ಮ ದುಃಖವನ್ನು ಹಂಚಿಕೊಂಡಾಗ ಮನಸ್ಸು ಹಗುರವಾಗುತ್ತದೆ ಎಂದು ತಿಳಿದವರು ಹೇಳುತ್ತಾರೆ. ಇದು ಷ್ವಲ್ಪ ಮಟ್ಟಿಗೆ ನಿಜವೆಂದು ಅನಿಸುತ್ತದೆ. ಆದರೆ ಆಚಾರ್ಯ ಇದನ್ನು ತಪ್ಪು ಎನ್ನುತ್ತಾನೆ. ಯಾಕಿರಬಹುದು ಗೊತ್ತೇ..? ಚಾಣಕ್ಯ ಹೇಳುವ ಪ್ರಕಾರ, ನಂಬಿಕೆಯುಳ್ಳವರ ಬಳಿ ಮಾತ್ರ ನಾವು ನಮ್ಮ ದುಃಖವನ್ನು ಹಂಚಿಕೊಳ್ಳಬೇಕು. ಬದಲಾಗಿ, ಪರಿಚಯಸ್ತರ ಬಳಿ, ಸಂಬಂಧಿಕರ ಬಳಿ, ಸಿಕ್ಕಸಿಕ್ಕವರ ಬಳಿಯೆಲ್ಲಾ ನಮ್ಮ ಮನಸ್ಸಿನ ನೋವನ್ನು ಹೇಳಿಕೊಳ್ಳಬಾರದು. ಯಾಕೆಂದರೆ ಕೆಲವರು ನಮ್ಮ ದುಃಖಕ್ಕೆ ಸಾಂತ್ವಾನ ನೀಡಿದರೆ ಇನ್ನು ಕೆಲವರು ನೋವಿನ ಮೇಲೆ ಮತ್ತೊಂದು ಬರೆಯೆಳೆಯುತ್ತಾರೆ. ಹಾಗಾಗಿ ಮನಸ್ಸಿನ ದುಃಖವನ್ನು ಪರರ ಬಳಿ ಎಂದಿಗೂ ಹಂಚಿಕೊಳ್ಳಬಾರದು.

ನೀಚ ವ್ಯಕ್ತಿಯ ತಪ್ಪು:ನೀಚ ವ್ಯಕ್ತಿಗಳು ಎಂದಿಗೂ ನೀಚ ಕೆಲಸವನ್ನೇ ಮಾಡುತ್ತಿರುತ್ತಾರೆಯೇ ಹೊರತು, ಉತ್ಕೃಷ್ಟ ಮಟ್ಟದ ಕೆಲಸವನ್ನು ಮಾಡಲು ಅವರ ಬಳಿ ಸಾಧ್ಯವಾಗುವುದಿಲ್ಲ. ಕೊಚ್ಚೆಯ ಮೇಲೆ ಕಲ್ಲೆಸೆದರೆ ಹೇಗೆ ನಮಗೆ ಕೊಳಕು ತಗುಲುತ್ತದೆಯೋ ಹಾಗೇ ನೀಚ ವ್ಯಕ್ತಿಗಳ ತಪ್ಪನ್ನು ಇತರರ ಬಳಿ ಹಂಚಿಕೊಂಡಾಗ ನಾವು ಕೂಡ ಅವರಂತೆ ನೀಚ ಸ್ವಭಾವದವರಾಗುತ್ತೇವೆ.

ಚಾಡಿ ಮಾತುಗಳು:ಒಬ್ಬರ ಬಗೆಗಿನ ರಹಸ್ಯವಾದ ವಿಷಯಗಳನ್ನು ಹೇಳುವುದು ಚಾಡಿ ಮಾತುಗಳಾಗುತ್ತದೆ. ಇನ್ನೊಬ್ಬರ ಮಾತುಗಳನ್ನು ಕದ್ದಾಲಿಸಿ, ಇತರರ ಬಳಿ ಹೋಗಿ ಅವರ ವಿಷಯಗಳನ್ನು ಹೇಳುವುದರಿಂದ ನಮ್ಮ ಸಮಯವೂ ವ್ಯರ್ಥ, ಜ್ಞಾನವೂ ವ್ಯರ್ಥವೆನ್ನುತ್ತಾನೆ ಚಾಣಕ್ಯ.

ಈ ವಿಷಯಗಳನ್ನು ಏಕೆ ಹೇಳಬಾರದು:ಈ ಮೇಲಿನ ವಿಷಯಗಳನ್ನು ಇತರರ ಬಳಿ ಹಂಚಿಕೊಂಡಾಗ ಜನರು ನಿಮ್ಮನ್ನು ಗೇಲಿ ಮಾಡುತ್ತಾರೆ ಎಂದು ಚಾಣಕ್ಯ ನಂಬುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಅವರಿಂದ ಸಹಾನುಭೂತಿಯನ್ನು ಪಡೆದರೂ ನೀವು ಹೆಚ್ಚು ದುಃಖವನ್ನು ಅನುಭವಿಸುವಿರಿ. ನಿಮ್ಮ ವೈಯಕ್ತಿಕ ವಿಷಯಗಳನ್ನು ನೀವು ರಹಸ್ಯವಾಗಿಡಬೇಕು ಎಂದು ಚಾಣಕ್ಯ ಹೇಳುತ್ತಾನೆ.

Leave a Comment