ನೀವು ಕೋರಿದ ಕೋರಿಕೆಗಳು ಅತಿ ಶೀಘ್ರವಾಗಿ ನೆರವೇರಬೇಕಾದರೆ ಗಣಪತಿಗೆ!

ಕಡ್ಲೆಕಾಳ್ ಆಹಾರವನ್ನು ಯಾವ ರೀತಿ ಮಾಡೋದು ಮತ್ತು ಪೂಜೆ ಯಾವ ರೀತಿ ಮಾಡೋದು ಅನ್ನೋದನ್ನ,
ಮೊದಲನೇದಾಗಿ ಕಡ್ಲೆಕಾಳ್ ಆಹಾರವನ್ನು ಮಾಡಲಿಕ್ಕೆ ಇಂದಿನ ರಾತ್ರಿಯಲ್ಲಿ ನೀವು ಕಡ್ಲೆಕಾಳನ್ನು ನೇನೇಸಿಡಬೇಕು. ಕಪ್ಪು ಕಡ್ಲೆಕಾಳು ಆಗಿರಬಹುದು ಅಥವಾ ಬಿಳಿ ಕಡ್ಲೆಕಾಳ ಆದರೆ ಕಾಬುಲ್ ಕಡ್ಲೆಕಳಾಗಿರುವುದು. ರಾತ್ರಿ ಇಡಿ ನೆನಸಿಟ್ಟು. ಬೆಳಗ್ಗೆ ಮಡಿಯಿಂದ ಸ್ನಾನ ಮಾಡಿ ಆನಂತರ 21 ಕಡಲೆಕಾಳನ್ನು ತೆಗೆದುಕೊಳ್ಳಬೇಕು, ಅಥವಾ ನೀವು ದೇವಸ್ಥಾನಕ್ಕೆ ಕಡಲೆಕಾಳು ಆಹಾರವನ್ನು ಕೊಡ್ತಾ ಇದ್ದೀರಾ ಅಂದ್ರೆ 108 ಆಗಲಿ ಕಡ್ಲೆಕಾಳನ್ನು ನೆನೆಸಿಟ್ಟು ಎರಡು ಎಳೆ ಬಿಳಿ ದಾರವನ್ನು ಮಾಡ್ಬಿಟ್ಟು ಸೂಜಿಯಿಂದ ಪೊಣಿಸಬೇಕಾಗುತ್ತದೆ.

21 ಕಡಲೆಕಾಳು ಹಾಕಿದ್ರೆ ಸಾಕು ಮನೆ ದೇವರಿಗೆ. ಅಥವಾ ನೀವು ದೇವಸ್ಥಾನಕ್ಕೆ ಕೊಡ್ತಾ ಇದ್ದೀರಾ ಅಂದ್ರೆ, 108 ಕಟ್ಟೆ ಕಾಳನ್ನು ಏರಿಸಿ ಸರಳವಾದ ಹಾರವನ್ನು ಒಂದು ತಯಾರು ಮಾಡಿಕೊಳ್ಳಿ. ಪೂಜೆಯನ್ನು ಯಾವ ರೀತಿ ಮಾಡೋದು ಅನ್ನೋದನ್ನ ನೋಡೋಣ ಬನ್ನಿ.

ಟೇಬಲ್ ಮೇಲೆ ಒಂದು ಕೆಂಪು ವಸ್ತ್ರವನ್ನ ಆಸಿ ಅದರ ಮೇಲೆ ಗಣಪತಿ ಫೋಟೋ ಆಗಲೇ ವಿಗ್ರಹ ಆಗಲಿ ಇಟ್ಟುಕೊಳ್ಳಿ, ಆನಂತರ ನೀವು ಮಾಡಿರ್ತಕ್ಕಂತ ಕಡ್ಲೆಕಾಳ್ ಆಹಾರವನ್ನು ಹಾಕಿ ಕೆಂಪು ಹೂಗಳಿಂದ ಅಲಂಕಾರ ಮಾಡಿ. ಎಲ್ಲಾ ದೇವರುಗಳಿಗೂ ಹೂಗಳಿಂದ ಅಲಂಕಾರ ಮಾಡಲಾಯಿತು. ಆನಂತರ ದೀಪಗಳನ್ನು ಇಟ್ಟು ದೀಪಗಳಿಗೂ ಸಹ ಹೂ ಗಳಿಂದ ಅಲಂಕಾರ ಮಾಡಲಾಯಿತು. ನೈವೇದ್ಯಕ್ಕೆ ಹಣ್ಣನ್ನ. ಇಡಬೇಕು ಗಣಪತಿಗೆ ಕೆಂಪು ಅಂದರೆ ತುಂಬಾನೇ ಪ್ರೀತಿ. ಹಾಗಾಗಿ ಕೆಂಪು ಹೂಗಳನ್ನ ಮತ್ತು ಕೆಂಪು ಅಕ್ಷತೆಗಳನ್ನು ಪೂಜೆಗೆ ಬಳಸಿ ತುಂಬಾನೇ ಒಳ್ಳೆಯದು.

ಈಗ ದೀಪಗಳನ್ನು ಹಚ್ಚಿಕೊಂಡು ಪೂಜೆ ಶುರು ಮಾಡೋಣ ನೀವೇನಾದರೂ ಇದೇ ಹೂ ಆಗ್ಬೇಕು ಅಂತ ಅವಶ್ಯಕತೆ ಏನಿಲ್ಲ. ಮನೆಯಲ್ಲಿ ಬಿಟ್ಟಿರತಕ್ಕಂತ ಹೂಗಳನ್ನ ದೇವರ ಪೂಜೆಗೆ ಬಳಸ್ತಾ ಇದ್ದೇನೆ. ಯಾವ ಹೂ ಆದ್ರೂ ಪರವಾಗಿಲ್ಲ ಮನಸ್ಸು ಶುದ್ದವಾಗಿರಬೇಕು. ಪೂಜೆ ಮಾಡೋದಕ್ಕೆ.

ಪಂಚಪಾತ್ರೆ ಉದ್ಧರಣೆಯಲ್ಲಿ ನೀರನ್ನು ಇಟ್ಟುಕೊಂಡಿದ್ದೇನೆ ಯಾವಾಗಲೂ ಅಷ್ಟೇ. ಪಂಚ ಪಾತ್ರ ಉದ್ದರಣೆಯಲ್ಲಿ ಯಾವಾಗಲೂ ನೀರನ್ನು ಇಟ್ಟುಕೊಂಡಿರಬೇಕು ಯಾವುದೇ ಪೂಜೆ ಎಲ್ಲಾದರೂ. ಇವಾಗ ಗರಿಕೆಯಿಂದ ಅರ್ಚನೆ ಮಾಡ್ತಾ ಇದ್ದೇನೆ, ಗಣಪತಿ ಅಷ್ಟೋತ್ತರ ಗಳನ್ನು ಹೇಳಿಕೊಂಡು, ಗರಿಕೆಯಿಂದಾಗಲಿ ಅಥವಾ ಅಕ್ಷತೆಯಿಂದಾಗಲಿ ನೀವು ಅರ್ಚನೆಯನ್ನು ಮಾಡಿಕೊಳ್ಳಿ.

ನಿಮಗೆ ಸಿಕ್ಕಿದರೆ ಎಕ್ಕದ ಹೂವು ಅಥವಾ ಕಣಗ್ಲೆ ಹೂವ ತುಂಬೆ ಹೂವು, ಬಿಲ್ಪತ್ರೆ ಈ ರೀತಿ ಹೂಗಳನ್ನು ಬಳಸಿ ನೀವು ಪೂಜೆಯನ್ನು ಮಾಡಿ ತುಂಬಾ ಒಳ್ಳೆಯದು. ಯಾವುದು ಸಿಗದೇ ಇದ್ದರೂನು ಪರವಾಗಿಲ್ಲ. ಗರಿಕೆ ಸಿಕ್ಕಿದರೆ ಸಾಕು ಆದ್ರಿಂದ ಪೂಜೆ ಮಾಡಿ, ಗಣಪತಿ ಸಂತ್ರಪ್ತನಾಗುತ್ತಾನೆ. ಅಗರಬತ್ತಿ ಹಚ್ಚಿಕೊಂಡು ದೂಪವನ್ನು ಮಾಡುತ್ತಾರೆ. ಧೂಪ ಆದ ನಂತರ ನೈವೇದ್ಯವನ್ನು ಮಾಡೋಣ ಸರಳವಾಗಿ ಮನೆಯಲ್ಲಿ ಏನು ಇರುತ್ತೆ, ಕಲ್ ಸಕ್ಕರೆ ಆಗ್ಲಿ ಅಥವಾ ಬೆಲ್ಲದ ಚೂರಾಗಲಿ ಅಥವಾ ಕೊಬ್ಬರಿ ಆಗಲೇ, ಯಾವುದನ್ನಾದರೂ ಇಟ್ ಬಿಟ್ಟು ನೈವೇದ್ಯ ಮಾಡಬಹುದು.

ಕರ್ಪೂರ ಹಚ್ಚಿಕೊಂಡು ಮಹಾಮಂಗಳಾರತಿ ಮಾಡೋಣ ಗಣಪತಿಗೆ. ಸರಳವಾದ ಪೂಜೆಯನ್ನು ಬುಧವಾರ ಮಾಡಿ ತುಂಬಾನೇ ಒಳ್ಳೆಯದು ಅಥವಾ ಸಂಕಷ್ಟ ಚತುರ್ಥಿ ದಿಸ ಪೂಜೆಯನ್ನು ಮಾಡಿ ಹಾಗೇನೆ ಹಾರವನ್ನು ಹಾಕಿ ಪೂಜೆ ಮಾಡಬಹುದು. ನೀವು ಮನಸ್ಸಲ್ಲಿ ಅನ್ಕೊಂಡು ಪ್ರತಿ ಬುಧವಾರ. ಪ್ರತಿ 21 ಬುಧವಾರಗಳು ದೇವಸ್ಥಾನಕ್ಕೆ 108 ಕಡ್ಲೆಕಾಳು ಹಾರವನ್ನು ನಮ್ಮ ಕೈಯಾರೆ ತಂದು ಕೊಡ್ತೀನಿ ಅಂತ ಹೇಳಿಕೊಳ್ಳಿ. ಖಂಡಿತ ನಿಮ್ಮ ಕೆಲಸ ತುಂಬಾ ಬೇಗನೆ ನೆರವೇರುತ್ತದೆ. ನೀವು ದೇವಸ್ಥಾನಕ್ಕೆ ಹೋಗಿ ಕೊಡಕ್ಕಾಗದೆ ಅಂತ ಪಕ್ಷದಲ್ಲಿ 21 ಕಡ್ಡಿಗಳನ್ನು ಎಣಿಸಿ ಪ್ರತಿ ಬುಧವಾರ ಮನೆಯಲ್ಲೇನೇ ಗಣಪತಿ ಫೋಟೋಗೆ ಹಾಕಿ. ಈ ರೀತಿ ಸರಳವಾಗಿ ಪೂಜೆಯನ್ನು ಮಾಡಿ. ನೀವು ಅಂದುಕೊಂಡಿರುವ ಕೆಲಸ ತುಂಬಾ ಬೇಗನೆ ಕರೆಸಿದ್ದು ಕೊಳ್ಳುತ್ತದೆ.

ಇನ್ನು ಪೂಜೆ ಎಲ್ಲ ಮುಗುದ್ಮೇಲೆ ಮನೆಯಲ್ಲಿ ಕಡಲೆಕಾಳು ಆಹಾರವನ್ನು. ಹಾಕಿರ್ತೀರಲ್ಲ ಏನ್ ಮಾಡಬೇಕು ಅಂತ ಕೇಳ್ತೀರಲ್ಲ, ಅ ಪೂಜೆ ಎಲ್ಲ ಮುಗುದ್ಮೇಲೆ ಕಡ್ಲೆಕಾಳ್ ಹಾರದಿಂದ ಕಡ್ಲೆ ಕಾಳನ್ನೆಲ್ಲ ತೆಗೆದು ಮನೆಯಲ್ಲಿ ಇರುವವರೆಲ್ಲ ಪ್ರಸಾದ ರೂಪದಲ್ಲಿ ಸೇವಿಸಬಹುದು.. ಕಡ್ಲೆ ಕಾಳು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಕಡ್ಲೆಕಾಳ್ ಯಾರು ತಿನ್ನೋದಿಲ್ಲ ಅಂತ ಅಂದ್ರೆ, ಮಣ್ಣಲ್ಲಿ ಹಾಕಿ ಗಿಡದ ಬುಡಕ್ಕೆ ಹಾಕಬಹುದು.

Leave a Comment