‘ಜೆಡಿಎಸ್​ನವರು ಗೆದ್ದರೆ ಬಿಜೆಪಿಯವರಿಗೆ ಮಾರಾಟ ಆಗ್ತಾರೆ’

ಕೋಲಾರ: ಜೆಡಿಎಸ್ ಪಕ್ಷದವರು ಗೆದ್ದರೆ ಬಿಜೆಪಿಯವರಿಗೆ ಮಾರಾಟ ಆಗುತ್ತಾರೆ ಎಂದು ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ವಾಗ್ದಾಳಿ ನಡೆಸಿದ್ದಾರೆ. ‘ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ’ದ ಅಂಗವಾಗಿ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿದೆ. ಪಾದಯಾತ್ರೆ ವೇಳೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಗ್ರಾಮದಲ್ಲಿ ಕೆ.ವೈ.ನಂಜೇಗೌಡ ಮಾತನಾಡಿದ್ದಾರೆ. ಜೆಡಿಎಸ್ ನಾಯಕರ ವಿರುದ್ಧ ಕಿಡಿಕಾರಿರುವ ನಂಜೇಗೌಡ, ‘ಈ ಹಿಂದೆಯೇ ಜೆಡಿಎಸ್ ನವರು ಬಿಜೆಪಿಯವರಿಗೆ ಮಾರಾಟವಾಗಿದ್ದರು. ಜೆಡಿಎಸ್ ಅವರಿಗೆ 20-25 ಸೀಟ್ ಬಂದ್ರೆ ಕತೆ ಮುಗೀತು. ಅವರು ಮತ್ತೆ ಬಿಜೆಪಿ ಜೊತೆ ಹೋಗ್ತಾರೆ. ಇದರಲ್ಲಿ … Read more